ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ.
ಅವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ.
ಬನ್ನಿ, ಅವಿರತ ತಂಡಕ್ಕೆ ನೀವೂ ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.
ಜನಗಣ ರಾಷ್ಟ್ರೀಯ ರಂಗ ವೇದಿಕೆ ಅಭಿನಯದ, ನಿರ್ದೇಶಕ ಪವನ್ ಪ್ರಸಾದ್
ಶರ್ಮ ನಿರ್ದೇಶನದ ’ಬೀದಿ ಬಿಂಬ ರಂಗದ ತುಂಬ’ ನಾಟಕವನ್ನು ಎಂಬ ಹಾಸ್ಯ, ವಿಡಂಬನಾತ್ಮಕ
ನಾಟಕವನ್ನು ಬೆಂಗಳೂರು ಧಾರವಾಡ ಹುಬ್ಬಳ್ಳಿ
ದೊಡ್ಡಬಳ್ಳಾಪುರ ಎಲ್ಲೆಡೆ ಸೇರಿ ೭ ಬಾರಿ ಆಯೋಜಿಸಲಾಗಿತ್ತು.