ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ. ಬನ್ನಿ, ಅವಿರತ ತಂಡಕ್ಕೆ ನೀವೂ ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.
Friday, April 10, 2015
Wednesday, April 8, 2015
Tuesday, April 7, 2015
Saturday, April 4, 2015
ಬೇಂದ್ರೆ ಬೆಳಗು
ಬಾ ಬಾರೋ, ಬಾರೋ ಬಾರೋ
ಬಾರೋ ಕಲಾ ಸೌಧಕ್ಕ, ಹೊರಳಿ ನಮ್ಮೀ ಅವಿರತಕ್ಕ...
ಬೇಂದ್ರೆ ಸೆಳೆಯುವ ಮಾಯಕ್ಕೆ,
ಬೇಂದ್ರೆ ಕಟ್ಟಿದ ಭಾವಕ್ಕೆ,
ಬೇಂದ್ರೆ ಬೆಡಗಿನ ಬೆಳಗಿಗೆ,
ಬೇಂದ್ರೆ ಸಾಹಿತ್ಯ ಸಂಭ್ರಮಕ್ಕೆ,
ಚಂದದ ಸಂಗೀತ ರಾಗವೊಂದು ಬಿದ್ದಿದೆ
ಕೇಳುವ ಸುಖ ಬೇಡ ಯಾರಿಗೆ?
ನಗರ ಜನವೇ ಬರಲಿದೆ,
ಶ್ರೋತೃಗಳಿಗೆ ಸು ಕರಣವಿದೆ,
ಅರಸಿಕನಿಗೂ ಆಲಾಪ ಸೆಳದಿದೆ,
ಗಾಯನಕ್ಕೆ ರಾಗವು ತುಂಬಿದೆ,
ಸಂಗೀತ ಪ್ರೇಮಿಗಳು ಮನೆಯಿಂದ ಎದ್ದರೊ,
ಬೇಂದ್ರೆ ಬೆಳಗು ಬೆರಗಲಿದೆ.
ಕವಿತೆ ಕಡಲಿಗೂ ಹರಿದಿದೆ,
ಗುಡ್ಡದ ಮರದೊಳೂ ಕೇಳಿದೆ,
ಮಾಸ್ತರ ಮಾಯೆ ಎಲ್ಲೂ ಹರಡಿದೆ,
ಬೇಸರ ಇಲ್ಲಿಂದ ಕಾಲ್ಕಿತ್ತಿದೆ,
ಹೇಳೊ ಸ್ನೇಹಿತ, ಬೇರೆ ಎಲ್ಲಿ
ಈ ರೀತಿ ನಲಿವ ಪಡಿವೆ..!!