Wednesday, April 20, 2016

ರಾಜ್ ರಾಗ

ಸ್ನೇಹಿತರೆ,
ರಾಜ್ ರಾಗ, ಇದು ಅವಿರತ ಪ್ರಸ್ತುತ ಪಡಿಸುತ್ತಿರುವ 2016 ರ 4 ನೇ ಕಾರ್ಯಕ್ರಮ, ನಮ್ಮ 4 ನೇ ಹೆಜ್ಜೆ 👣🎉 ...!
ಅವಿರತವು ಕನ್ನಡ ನಾಡಿನ ಅತ್ಯಾಪರೂಪದ ಅಪರಂಜಿ, ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ|| ರಾಜಕುಮಾರ ಅವರನ್ನು ಮೆಲುಕು ಹಾಕುವ ವಿಶೇಷ ಸಂಗೀತ ಸಂಜೆಯನ್ನು ಭ್ರಮೆ ತಂಡದ ಸಹಯೋಗದಲ್ಲಿ ನಿಮ್ಮೆಲ್ಲರ ಮನರಂಜಿಸಲು ಮತ್ತೆ ಸಿದ್ಧವಾಗಿದೆ.
ವಿಶೇಷ ಅತಿಥಿ: ಶ್ರೀ ರಾಜನ್, ಸಂಗೀತ ನಿರ್ದೇಶಕರು.
ದಿನಾಂಕ : ಎಪ್ರಿಲ್ 24
ಸ್ಥಳ : ಕೆ. ಇ. ಎ ಪ್ರಭಾತ ರಂಗಮಂದಿರ
(Karnataka Engineers Academy, Basaveshwara Nagar)
ಸಮಯ : ಸಂಜೆ 4:30 ಕ್ಕೆ
ಬನ್ನಿ, ರಾಜ್ ರಾಗದಲ್ಲಿ, ಸಡಗರದಲ್ಲಿ ಭಾಗಿಯಾಗಿ...
ನಿಮ್ಮ ಉಪಸ್ಥಿತಿ & ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.

Friday, March 11, 2016

ಅವಿರತ ಜೀವ ನಿಧಿ..

ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ "ಆರೋಗ್ಯ"ವು ಕೂಡ ಒಂದು. ಪ್ರತಿ ವರ್ಷ, ಅವಿರತವು ಹಳ್ಳಿಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದೆ ಹಾಗೇ ಮುಂದುವರೆಸುತ್ತೆ ಕೂಡ. ಮಕ್ಕಳ ಶೈಕ್ಷಣಿಕ ಕಾಳಜಿಯ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಆಸ್ಥೆ ವಹಿಸುತ್ತಿದೆ. ಈಗ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ...
ನಮ್ಮ ಕುಟುಂಬದವರೊ, ಸಂಬಂಧಿಕರೊ, ಸ್ನೇಹಿತರೊ ಅಥವಾ ನೆರೆಹೊರೆಯವರೊ ಅನಾರೋಗ್ಯ ಕಾರಣದಿಂದ ಬಳಲುತಿದ್ದಾಗ ಅವಶ್ಯಕ  ರಕ್ತ ಲಭ್ಯವಿಲ್ಲದೆ ಪರಿದಾಡಿದ, ತೊಂದರೆಗೊಳಗಾದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ.. ಅನೇಕ ಬ್ಲಡ್ ಬ್ಯಾಂಕ್ ಗಳಿದ್ದೂ, ಸ್ನೇಹಿತ & ಸಂಬಂಧಿಕರ ನೆಟ್‌ವರ್ಕ್ ಇದ್ದೂ ರಕ್ತವನ್ನು ಹೊಂದಿಸದ ಘಟನೆಗಳಿವೆ. ಇಂತಹ ಪರಿಸ್ಥಿತಿಗಳಿಂದ ಹೊರಬರಲು ಅವಿರತವು ಮೊಬೈಲ್ ಅಪ್ಲಿಕೇಶನ್ ಒಂದನ್ನು ಸಿದ್ದಪಡಿಸುತ್ತಿದೆ. ಅವಿರತ ಸದಸ್ಯ ಶ್ರೀಕಾಂತ್ ಚಕ್ರವರ್ತಿ ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸುತ್ತಿದ್ದು ಸದ್ಯದಲ್ಲೇ ಜನರಿಗೆ ತಲುಪಲಿದೆ. 
ರಕ್ತ ದಾನವನ್ನು ಮಾಡಲಿಚ್ಛಿಸುವವರು, ನಮ್ಮ ರಕ್ತದಾನಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವವರು  blooddonor.aviratha@gmail.com ಗೆ ತಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್ ವಿವರಗಳನ್ನು ಕಳುಹಿಸಬಹುದು.  ಅಗತ್ಯ ಸಮಯದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.

ಬನ್ನಿ,
ರಕ್ತವನ್ನು ನೀಡೋಣ,
ಜೀವವನ್ನು ಉಳಿಸೋಣ,
ನಗುವನ್ನು ಮೂಡಿಸೋಣ..!

ಅವಿರತದ ಜೊತೆ ನಿಮ್ಮ ಸಹಕಾರವಿರಲಿ.

Friday, January 22, 2016

ಮಲ್ಲಿಗೆ ಪರಿಷೆ

ಸ್ನೇಹಿತರೇ,

ಮಲ್ಲಿಗೆಯ ಪರಿಮಳ ಹರಡುತ್ತಿದೆ...ಪ್ರೇಮ ವೀಣೆ ಮತ್ತೆ ಮಿಡಿಯುತ್ತಿದೆ...!! ಇದು ಮನಸುಗಳು ಅರಳುವ ಸಮಯ..

ಅವಿರತವು, ಹೊಸ ವರುಷವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ವರ್ಷದ ಮೊದಲ ಕೊಡುಗೆ ರಂಗವಲ್ಲಿಯನ್ನು ಜನಮನ ತಲುಪಿಸಿ ಯಶಸ್ವಿಯಾಗಿದೆ.

ಅದು ರಂಗಲೋಕ ಇದು ಪ್ರೇಮಲೋಕ. ಹೌದು, ಕೆ ಎಸ್ ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಪ್ರೇಮ ಕಾವ್ಯ ಸುಗ್ಗಿಯ ಜೊತೆಗೆ ಚಿಕ್ಕದಾದ ವಿಶೇಷ ಮಲ್ಲಿಗೆ ಪರಿಷೆಯನ್ನು ಪ್ರಸ್ತುತಪಡಿಸುತ್ತಿದೆ.

ವಿನಯ ನಾಡಿಗ್ ಮತ್ತು ಸಂಗಡಿಗರ ಧ್ವನಿಯಲ್ಲಿ ಅರಳಲಿವೆ ಕೆ.ಎಸ್.ಎನ್ ಅವರ ಕವನ ಮೊಗ್ಗುಗಳು..! 

ಅವಿರತ ತಂಡದಿಂದ ಪ್ರೇಮ ಕವಿಯ ಸಂಭ್ರಮವನ್ನು ವಿಭಿನ್ನವಾಗಿ ಕಟ್ಟಿಕೊಡುವ, ವಿಶೇಷ ಅನುಭವವನ್ನು ನೀಡುವ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ  ಅತ್ಯಗತ್ಯ..!

ಬನ್ನಿ, ಈ ಮಲ್ಲಿಗೆ ಪರಿಷೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ..!

ನಿಮ್ಮ,
ಅವಿರತ ತಂಡ.

Thursday, December 17, 2015

ರಂಗವಲ್ಲಿ...

ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ರಂಗ ಗೀತೆಗಳ ಕಾರ್ಯಕ್ರಮವೊಂದು,  ಮುಂದಿನ ತಿಂಗಳು ಜನವರಿ 2 ರಂದು ಎಲ್ಲ ಅಡೆತಡೆಗಳ ನೀಗಿ ನಡೆಯಲಿದೆ. ಅದೇ "ರಂಗವಲ್ಲಿ".., ವಿಶೇಷ ಸಂಗೀತ ಸಂಜೆ..!

ಇಬ್ಬರು ರಂಗಕರ್ಮಿ, ಸಾಹಿತಿ, ಕವಿಗಳಾದ ಶ್ರೀ ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ಆಯ್ದ ಅಪರೂಪದ ಮಧುರವಾದ ರಂಗ ಗೀತೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ ಉದಯೋನ್ಮುಖ ಗಾಯಕ, ನಲ್ಮೆಯ ಗೆಳೆಯ ರಾಮಚಂದ್ರ ಹಡಪದ್ ಮತ್ತು ತಂಡದವರು.

ನಮ್ಮಅವಿರತ ತಂಡದ ಮತ್ತೊಂದು ಸದಭಿರುಚಿಯ ಈ ಕಾರ್ಯಕ್ರಮಕ್ಕೆ ದೃಶ್ಯ ಕಾವ್ಯ ತಂಡದವರು ಕೈ ಜೋಡಿಸಿದ್ದಾರೆ.

ಈ ರಂಗ ಸಂಭ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ..

ಸ್ಥಳ :
ಸಂಸ ಬಯಲು ರಂಗಮಂದಿರ,
ರವೀಂದ್ರ ಕಲಾಕ್ಷೇತ್ರ ಆವರಣ,
ಜೆ.ಸಿ. ರಸ್ತೆ, ಬೆಂಗಳೂರು.

ದಿನಾಂಕ: 02 ಜನವರಿ 2016

ದಯವಿಟ್ಟು ಇಂದೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿರಿ.

ನಿಮ್ಮ ನಿರೀಕ್ಷೆಯಲ್ಲಿ,
ಅವಿರತ ತಂಡ...

Monday, September 21, 2015

"ನಾನು ಅವನಲ್ಲ ಅವಳು"

ಸ್ನೇಹಿತರೆ,

ಅವಿರತವು ಇದೆ ರವಿವಾರ, ಬಿ. ಎಸ್. ಲಿಂಗದೇವರು ನಿರ್ದೇಶನದ, ರವಿ ಗರಣಿ ನಿರ್ಮಾಣದ, ಸಂಚಾರಿ ವಿಜಯ ಅಭಿನಯದ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದ "ನಾನು ಅವನಲ್ಲ ಅವಳು" ಚಿತ್ರದ ವಿಶೇಷ ಪ್ರದರ್ಶನ ಹಾಗೂ ಚಿತ್ರ ತಂಡದೊಂದಿಗೆ ಸಂವಾದವನ್ನು ಸವಿತಾ ಚಿತ್ರಮಂದಿರದಲ್ಲಿ ಏರ್ಪಡಿಸಿದೆ.

ದಿನಾಂಕ: 27 ಸೆಪ್ಟೆಂಬರ್ 2015 ಭಾನುವಾರ

ಸಮಯ : ಮಧ್ಯಾಹ್ನ 2.30ಕ್ಕೆ
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.

ಬನ್ನಿ, ನಮ್ಮ ಜೊತೆ ಸೇರಿ. ಒಂದು ಒಳ್ಳೆಯ ಚಿತ್ರವನ್ನು, ಚಿತ್ರ ತಂಡವನ್ನು ಬೆಂಬಲಿಸೋಣ..!!


Aishwarya S Murthy ಅವರ, ಅವಧಿಯಲ್ಲಿ ಪ್ರಕಟಿಸಿದ ಈ ಚಿತ್ರದ ವಿಮರ್ಶೆಯನ್ನು ನೋಡಿ.