ಓದುವ ಮುನ್ನ:
ಭೀಮ ಧುರ್ಯೋಧನರ ಗಧಾ ಯುದ್ದವನ್ನು ಎರಡು ಪುಟಕ್ಕೆ ಮೀರದಂತೆ ಬರಿಯಿರಿ"
ನಿಮ್ಮ ನೆಚ್ಚಿನ ಒಳ್ಳೆ ಹವ್ಯಾಸ(favorite Hobby) ಎಂಬುದರ ಬಗ್ಗೆ ಒಂದು ಪುಟ ಕ್ಕೆ ಮೀರದಂತೆ ಪ್ರಭಂದ ಬರಿಯಿರಿ
ನಿಮ್ಮ ಶಾಲೆ ಮುಖ್ಯೊಪಧ್ಯಾಯರಿಗೆ ಮೂರು ದಿನ ರಜೆ ಬೇಕೆಂದು leave letter ಬರೆಯಿರಿ.
ಈ ತರಹದ ಪ್ರಶ್ನೆಗಳಿಗೆ ೧೦ನೇ ತರಗತಿಯಲ್ಲಿ ಕ೦ಠಾಪಾಟ ಮಾಡಿ ವಿವರವಾಗೀ ಬರೆದದ್ದು ಬಿಟ್ಟರೆ ಇಷ್ಟು ಸವಿಸ್ತಾರವಾಗೀ
ಕನ್ನಡದಲ್ಲಿ ಬರೆಯುತ್ತಿರುವುದು ಇದೆ ಮೊದಲ ಬಾರಿ,
ಬರೆಯಲು ಭಯ ಮುಜುಗರ ಎನಿಸಿದರೂ ತಪ್ಪಾದರೆ ತಿದ್ದಲು ನಮ್ಮ ಅಶ್ವಥ್ ಸರ್, ಮತ್ತು ನನಗಿಂತ ಚಿಕ್ಕವರಾದರೂ ಚೊಕ್ಕವಾಗಿ ಬರೆಯುವ ಹವ್ಯಾಸವಿರುವ ನಮ್ಮ ರೋಹಿತ್, ಐಶ್ವರ್ಯ, ಪ್ರಸನ್ನ, ರಾಧಿಕಾ, ದೀಪಕ್ ಮಳಲಿ ರವರು, ಇದ್ದಾರೆ ಎಂಬ ಧೈರ್ಯದಿಂದ ಈ ಸಾಹಸಕ್ಕೆ ಕೈ ಹಾಕಿದ್ದೇನೆ. ಶಂಕರಭಟ್ಟರು ಹೇಳಿರುವಂತೆ ಅಲ್ಪಪ್ರಾಣ ಮಹಾಪ್ರಾಣಗಳ ವೆತ್ಯಾಸವೇನಿದ್ದರೂ ಸರಿಮಾಡಿಕೊಂಡು ಓದಬೇಕೆಂದು ವಿನಂತಿ)
“ಅವಿರತ ಅಂದರೆ ಏನು.?
ನಿಮ್ಮ ಗುಂಪಲ್ಲಿ ಡಾಕ್ಟರ್ ಗಳೂ ಇದ್ದಾರಾ?
ನಿಮ್ಮ ಕಚೇರಿ ಎಲ್ಲಿ ಬರುತ್ತೆ.?
ನೀವೆಲ್ಲಾ meeting ಎಲ್ಲಿ ಸೇರ್ತೀರಾ ?
ಇದ್ದಾಕ್ಕೆಲ್ಲಾ ಹಣ ಹೇಗೆ ಸಂಗ್ರಹಿಸ್ತೀರಾ?
ಸರ್ಕಾರದಿಂದ ಏನಾದ್ರೂ ಸಹಾಯ ಪಡಿತೀರಾ?
ಇದನ್ನೆಲ್ಲಾ ಮಾಡಲು ಟೈಮ್ ಹೇಗೆ ಸಿಗುತ್ತೆ?
ಯಳಂದೂರು BEO officer ಕೇಳಿದ ಈ ಪ್ರಶ್ನೆಗಳಿಗೆ ಉತ್ತರಿಸಲು ಬಹಳ ಕಷ್ಟವಾಯಿತು.
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಮೇಲೆ BEO officer ತೋರಿದ ಕೃತಜ್ಞಾತಾ ಭಾವ, ಮಾಡಿದ ಪ್ರಶಂಶೆ, ನಮಗೆಲ್ಲಾ ಕೊಟ್ಟ ಮರ್ಯಾದೆ, ಶಾಲೆ ಮೇಸ್ಟ್ರುಗಳೆಲ್ಲಾ ತೋರಿದ ಪ್ರೀತಿ, ಶಾಲೆ ಹುಡುಗರು ನಮ್ಮನ್ನೇನೋ celebrity ಗಳು ಎನ್ನುವ ಹಾಗೆ ನೋಡುತ್ತಾ ಕೈ ಕುಲುಕಲು ಮುಗಿಬಿದ್ದಾ ರೀತಿ...........ಇದ್ದಾನ್ನೆಲ್ಲ ನೋಡಿ ಅವಿರತ ಸದಸ್ಯ ಆಗಿದ್ದಕ್ಕೆ ಸಾರ್ಥಕವಾಯಿತು ಎನಿಸಿತು.
ಹೌದು ಇದೆಲ್ಲಾ ನೆಡೆದದ್ದು ಯಳಂದೂರು ಶಾಲೆಯ MEDICAL HEALTH CAMP project ಟೈಮ್ ನಲ್ಲಿ.
ನನಗಿನ್ನೂ ನೆನಪಿದೆ ನಾವು ೧೦ ನೇ ತರಗತಿ ಮುಗಿಸಿ ಪೀ ಯೂ ಸಿ ಗೆ ಸೇರಲು ನಮ್ಮ ಮಾರ್ಕ್ಸ್ card, ಟಿ ಸಿ ನಕಲಿ ಪ್ರತಿಗಳನ್ನುಮಾಡ್ಬೇಕಾದ್ರೆ ನಕಲು ಪ್ರತಿ ಗಳಲ್ಲಿ ನಾವೇ ಅಂಕಗಳನ್ನು ತುಂಬಿ ಗೆಜೆಟೆಡ್ officer ಸಹಿ ಪಡಿಬೇಕಿತ್ತು (ಈಗಿನ ಹಾಗೆ ಜೇರಾಕ್ಸ್ ಇರಲಿಲ್ಲ)ಇದೆ ತರ BEO ಆಫೀಸರ್ ಕಛೇರಿ ಮುಂದೆ ಸರತಿ ಸಾಲಿನಲ್ಲಿ ನಿಂತು ಅವರ ಸಹಿಗೋಸ್ಕರ ಗಂಟೆಗಟ್ಟೆಲೆ ಕಾದ ಆ ದಿನಗಳು, ಗೆಜೆಟೆಡ್officerಗಳನ್ನು ದೇವರು ತರ ನೋಡುತಿದ್ದ ಆ ಕಾಲ ನೆನಪಾದವು. ಇಂದು ಅದೇ ತರದ BEO officer, ನಮೆಗೆಲ್ಲ “ಸಾರ್” ಎಂದುಸ್ಂಭೋದಿಸಿದ ರೀತಿ, ಅವಿರತ ತಂಡಕ್ಕೆ ಕೊಟ್ಟ ಬೆಂಬಲ, ಕಂಡು ಬಹಳ ಖುಷಿಯಾಯಿತು.
ಹೊರುಡುವುದಕ್ಕೆ ಎರಡು ದಿನ ಮುಂಚೆ
ಸತೀಶ್ ಗೌಡ್ರು ಬೆಳಗ್ಗೆ ೫-೩೦ ಘಂಟೆ ಗೆ ಬ್ಯಾಂಗಲುರ್ ಬಿಡಬೇಕು, ೫ ಘಂಟೆಗೆ ಸರಿಯಾಗಿ ರಾಜರಾಜೇಶ್ವರಿ ಗೇಟ್ ಬಳಿ ಇರಬೇಕುಎಂದು ಹೇಳಿದಾಗ, ಇದ್ದೆಲ್ಲಾ ಆಗೋ ಮಾತ, ಅಂದು ಕೊಂಡಿದ್ದಂತೂ ನಿಜ, ಆದರೆ ಎಲ್ಲಾರು ಸರಿಯಾದ ಟೈಮ್ ಗೆ ಸೇರಿದ್ದು ನೋಡಿದರೆಎಲ್ಲರಿಗೂ ಅವಿರತ ದ ಬಗ್ಗೆ ಇರುವ ಆಕ್ಕರೆ, ಶ್ರದ್ದೆ, ಎತ್ತಿ ತೋರುತ್ತದೆ.
ನಾವು ಮನೆಯನ್ನು ೫ ಗಂಟೆ ಗೆ ಬಿಟ್ಟು ದಾರಿಯಲ್ಲಿ ಪೇಪರ್ ಹಾಕುವವರು ಮಿಲ್ಕ್ ಹಾಕುವವರು ಮನೆಮನೆ ಗಳಿಗೆ ಹಾಕಲುಜೋಡಿಸಿಕೊಳ್ಳುತ್ತಾ ಇರುವ ತಯಾರಿ, ನೋಡುತ್ತಾ ಬರೀ ೨೦ ನಿಮಿಷದಲ್ಲಿ ಮೈಸೊರ್ ರೋಡ್ ನ್ನು ತಲುಪಿದಾಗ ಆಬ್ಬಾ ಬ್ಯಾಂಗಲುರ್ಯಾವಾಗ್ಲೂ ಈಗೆ ಇರಬಾರದಾ ಅನ್ನಿಸಿತ್ತು.
ರಾಜರಾಜೇಶ್ವರಿ ಗೇಟ್ ಬಳಿ ಎಲ್ಲಾರು ಸೇರಿ ಅಲ್ಲಿಂದ ನಮ್ಮ ನಮ್ಮ ಕಾರು ಗಳಲ್ಲಿ ಹೊರಟು ತಿಂಡಿ ತಿನ್ನಲು ನಮ್ಮ ಹೆಜ್ಜೆಗೆಜ್ಜೆ ನೆಡೆದಜನಪದ ಲೋಕದ ಬಳಿ ಇರುವ ಹೋಟೆಲ್ ತಲುಪಿದಾಗ ಅವರಿನ್ನೂ ಮಲಗಿದ್ದನ್ನು ನೋಡಿ ಪರವಾಗಿಲ್ಲ ಪ್ರಂಪಂಚದಲ್ಲಿ ನಾವುಕೆಲವರಿಗಿಂತ fast ಇದ್ದೀವಿ ಅಂತ ಗೊತ್ತಾಯಿತು. ಗೌಡ್ರು ಅವರನ್ನುಬಿಡದೆ ಎಬ್ಬಿಸಿ ಕೊನೆಗೂ ತಿಂಡಿ ಮಾಡಿಸಿಕೊಂಡು ತಿಂದು ಅಲ್ಲಿಂದಯಳಂದೂರ್ ಕಡೆ ಪ್ರಯಾಣ ಬೆಳೆಸಿದಾಗ ಸರಿಯಾಗಿ ೮-೩೦ ಗಂಟೆ.
ಅಲ್ಲಿಂದ ನಾವು ಕೊಳ್ಳೇಗಾಲ ತಲುಪುವುದರ ಒಳಗೆ Dr. ಹಿಮಾಂಶು ಮತ್ತು ಇತರ ಡಾಕ್ಟರ್ ಗಳ ತಂಡ ಬ್ಯಾಂಗಲುರ್ ನ್ನು ನಮಗಿಂತತಡವಾಗಿ ಬಿಟ್ಟು ಕನಕಪುರ ಮಾರ್ಗವಾಗಿ ಕೊಳ್ಳೇಗಾಲ ತಲುಪಿ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿರುವುದು ನೋಡಿ ಇವರೇಷ್ಟು fast ಆಗಿಬಂದಿರಬಹುದು ಅಂತ ಬೆರಗಾಯಿತು. ಅಲ್ಲಿ ಎಲ್ಲಾ ಡಾಕ್ಟರ್ ಗಳ ಪರಿಚಯವನ್ನು ಚಿಕ್ಕದಾಗಿ ಮಾಡಿಕೊಂಡು ಶಾಲೆ ತಲುಪಿದಾಗ ೧೨ಗಂಟೆ,
ನಮ್ಮನ್ನೆಲ್ಲಾ ಕಾಯುತ್ತಿದ್ದ ಮಕ್ಕಳಿಗೆ ತಡ ಮಾಡದೆ ಮೆಡಿಕಲ್ ಚೆಕಪ್ ಸ್ಟಾರ್ಟ್ ಮಾಡಿಯೇ ಬಿಟ್ಟೆವು, ಡಾಕ್ಟರ್ ಎಲ್ಲಾ ತಯಾರಿಮಾಡುಕೊಳ್ಳುತ್ತಿರುವಾಗ ನಾವು ಅವಿರತ ಬ್ಯಾನರ್ ಕಟ್ಟುವಾಗ, BEO officer ಕೇಳಿದ ಪ್ರಶ್ನೆಗಳೇ ಪ್ರಾರಂಭದಲ್ಲಿಇರುವುದು....................... .............................. ......
ಇನ್ನೂ ಮಕ್ಕಳ ಆರೋಗ್ಯ ಅವರಿಲ್ಲಿರುವ ನ್ಯೂನತೆಗಳ ಬಗ್ಗೆ ಈಗಾಗಲೇ ಪ್ರಸನ್ನ ನವರು ಹೇಳಿರುವುದರಿಂದ ಅದರ ಬಗ್ಗೆ ಬರೆಯುತ್ತಿಲ್ಲ.ಆದರೆ ಬಹಳ ಮಕ್ಕಳು ಅಪೌಷ್ಟಿಕತೆ ಇಂದ ಇರುವುದು ಗೊತ್ತಾಯಿತು. ಅದಕ್ಕೆ ತಕ್ಕಂತೆ Dr. ನಿಜಗುಣ ಅವರು ಕೊಟ್ಟ ಸಲಹೆ ಪಾಲಿಸಿದರೆಶಿಕ್ಷಕರು ತಂದೆ ತಾಯಿಗಳಿಗೆ ಮಾರ್ಗದರ್ಶನಮಾಡಿ ಮಕ್ಕಳ ನ್ಯೂನತೆಗಳನ್ನು ಸರಿಪಡಿಸಿದರೆ ನಾವು medical camp ಮಾಡಿದ್ದಕ್ಕೂಸಾರ್ಥಕ.
ಇಲ್ಲಿ ತಮಾಷೆ ಸಂಗತಿ ಎಂದರೆ ವನಿತಾ ಕಾವ್ಯ ಕೃಪ Dr. ಸ್ಟೆಥಾಸ್ಕೋಪ್ ಹಿಡಿದು Facebook ಗಾಗಿ ಫೋಟೋ ತೆಗೆಸಿಕೊಳ್ಳುವಾಗ,ನಾನು ತೆಗೆಸಿಕೊಂಡೆ, “ನಾನು ಡಾಕ್ಟರ್ ಆಗಿದ್ದ್ರೆ ಚೆನ್ನಾಗಿತ್ತು, ಅಪ್ಪ ಹೇಳಿದ ಹಾಗೆ PUC ಯಲ್ಲಿ ಇನ್ನ ಸೌಲ್ಪ ಮಾರ್ಕ್ಸ್ ಸ್ಕೋರ್ ಮಾಡಿದ್ದ್ರೆಚೆನ್ನಾಗಿತ್ತು” ಅಂತ ಅನಿಸಿದ್ದಂತೂ ನಿಜ. ಬೇರೆಯವರದು ಗೊತ್ತಿಲ್ಲ.
ತಂದ ಬ್ಯಾಗ್ಸ್ ಯೂನಿಫಾರ್ಮ್ಸ್ ಎಲ್ಲಾ ಕೊಟ್ಟು ಹರೀಶ್ ಮನೆಯಲ್ಲಿ ರುಚಿಕಟ್ಟಾದ ಊಟ ಮಾಡಿದಾಗ ಸಮಯ ೨-೩೦, ಆತುರಾತುರವಾಗಿ ಊಟ ಮಾಡಿ ಎರಡು ಟೀಮ್ ಮಾಡಿಕೊಂಡು ಜಾಸ್ತಿ ಮಕ್ಕಳಿರುವ YK mole, uppina mole, ತಲುಪಿದಾಗ ೩.೩೦, ಸೌಲ್ಪವೂಸಮಯ ವ್ಯರ್ಥ ಮಾಡದೆ ಕೆಲಸ ಶುರು ಮಾಡೆಬಿಟ್ಟೆವು. ಎಲ್ಲರೂ ತಮಗೆ ಕೊಟ್ಟಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದಾಗ ರಾತ್ರಿ ೭ಗಂಟೆ ಎಲ್ಲಾ ಮೇಸ್ಟ್ರು ಮಕ್ಕಳಿಗೆ ಮನೆಗೆ ಹೋಗುವ ದಾವಂತ.
ಇಲ್ಲಿ ಬಂತು ನೋಡಿ ಆಘಾತ ಸುದ್ದಿ, Dr. ಕೇಶವ ಅವರ ತಂದೆಗೆ heart attact ಸುದ್ದಿ. ಹರ್ಷ ಕೂಡ ಹುಷಾರಿಲ್ಲದೆ ಹೊರಟು ನಿಂತಿದ್ದರು,ಅವರ ಜೊತೆ ಕೇಶವವರನ್ನು ಕಳುಹಿಸಿದರು ಉಪಯೋಗ ವಾಗಲಿಲ್ಲ,ಅವರು ಬ್ಯಾಂಗಲುರ್ ತಲುಪುವುದರ ಒಳಗೆ ಅವರ ತಂದೆಇಹಲೋಕ ತ್ಯಜಿಸಿದ್ದರು. ಇದು ಒಂದೇ ನಮ್ಮ ಸಾರ್ಥಕ ಮೆಡಿಕಲ್ ಕ್ಯಾಂಪ್ ನ ಬೇಸರದ ಸಂಗತಿ……
ಇಲ್ಲಿ ಎಲ್ಲರೂ ಎಷ್ಟು busy ಆದ್ವಿ ಅಂದ್ರೆ,ಇಲ್ಲಿ ಯಾರಿಗೂ ಫೋಟೋ ತೆಗೆಸಿಕೊಳ್ಳಲು ಪುರುಸೊತ್ತೇ ಇರಲಿಲ್ಲ. ನಮ್ಮ documents ಗೂಫೋಟೋ ಸಿಗಲಿಲ್ಲ. ನನ್ನ ಮ್ಯಾಜಿಕ್ ಕಿಟ್ ಕಾರ್ ಅಲ್ಲಿ ಕೆಲಸ ವಿಲ್ಲದೆ ಕುಳಿತಿತ್ತು. ಅಲ್ಲಿಗೆ ನಾವು ಅಂದುಕೊಡಿದ್ದ ಹೆಲ್ತ್ ಕ್ಯಾಂಪ್ಮುಗಿಯಿತು.
ಮತ್ತೆ ಹರೀಶ್ ಮನೆಯಲ್ಲಿ ಟಿ ಮುಗಿಸಿ ಬುಕ್ ಮಾಡಿದ್ದ ಫಾರ್ಮ್ ಹೌಸ್ ತಲುಪಿದಾಗ ರಾತ್ರಿ ೯ಗಂಟೆ, ಬೇರೆಯವರೆಲ್ಲ ಬಂದಾಗ ರಾತ್ರಿ೧೦.೩೦.
ಇಲ್ಲಿ ನಮ್ಮ ಅವಿರತದ ಎಲ್ಲಾ main singers ರಂಗ,ಕೃಪ,ಐಶ್ವರ್ಯ ಇದ್ದಾರೆ, ಎಲ್ಲಾರ ಕೈಯಲ್ಲೂ ಹಾಡಿಸಿವುದಕ್ಕಾಗಿ ನಾನು ದೀಪಕ್ಲಿರಿಕ್ ಎಲ್ಲಾ ಡೌನ್ ಲೋಡ್ ಮಾಡಿ ಪ್ರಿಂಟೌಟ್ ತೆಗೆದು ಕೊಂಡಿದ್ದ ಶೀಟ್ ಹಿಡಿದು ಕಾಯುತ್ತಾ ಕುಳಿತು ಎಲ್ಲಾ ಸೇರಿದಾಗ ರಾತ್ರಿ೧೧.೩೦, ಪ್ರಯಾಣದ ಸುಸ್ತು, ಹಸಿವು ಬೇರೆ, ಈ ಟೈಮ್ ನಲ್ಲಿ ಹಾಡುವುದಕ್ಕೆ ಯಾರಿಗೆ ತಾನೇ ಮೂಡ್ ಇರುತ್ತೆ, ಆದರೆ ಎಲ್ಲಾ ಸೇರಿಹಾಡುಗಳನ್ನು ಸ್ಟಾರ್ಟ್ ಮಾಡಿಯೇ ಬಿಟ್ಟೆವು. ಅಂದುಕೊಂಡಕ್ಕಿಂತಲೂ ಸಂಗೀತ ಕಾರ್ಯಕ್ರಮ ಚೆನ್ನಾಗಿ ಬಂತು. ನಿಜಗುಣ ಅವರ ದೇಶಿಭಾಷೆ ಹಾಡುಗಳು ತುಂಬಾನೇ ಮಜಾ ಕೊಟ್ಟವು, ಓಲ್ಡ್ ಸಾಂಗ್ ಎಕ್ಸ್ಪರ್ಟ್ ಜಗ್ದೀಶ್, ಡುಯೆಟ್ ಸಾಂಗ್ ಎಕ್ಸ್ಪರ್ಟ್ ರವಿ, ವಿಶೇಷ ಧ್ವನಿಯ ಲಾಲಿತ್ಯವಿರುವ ಸ್ವಪ್ನ ಅವರ ಗೈರು ಎದ್ದು ಕಾಣ್ತಾ ಇತ್ತು. ಭಟ್ಟರು ಊಟ ಕ್ಕೆ ಕರೆದಾಗಲೇ ಹಸಿವಿನ ಬಗ್ಗೆ ಗೊತ್ತಾಗಿದ್ದು. ಅದ್ಭುತಊಟ. ಮಲಗಿದಾಗ ರಾತ್ರಿ ೧-೩೦.
ಅಲ್ಲಿಗೆ ನಮ್ಮ ಮೊದಲನೇ ದಿನ ಮುಕ್ತಾಯ.
ಎರಡನೇ ದಿನ ಬೆಳಗ್ಗೆ ಮಾರ್ನಿಂಗ್ ವಾಕ್, ಫಾರ್ಮ್ ಹೌಸ್ ವೀಕ್ಷಣೆ, ಬಿಳಿಗಿರಿ ರಂಗನಾಥನ ದರ್ಶನ, k.ಗುಡಿ ಗೆ ಹೋಗುವಾಗ ಕಾಡಿನ ನಡುವೆ ೧೦-೨೦ ಕಿ ಮೀ ವೇಗ ದಲ್ಲಿ ಕಾರ್ ಓಡಿಸುತ್ತಾ ಯಾವುದಾದರೂ ಪ್ರಾಣಿ ಕಾಣುತ್ತಾ ಎಂದು ಎಲ್ಲಾ ಕಿಟಿಕೆ ಕಡೆ ನೋಡುತ್ತಾ ಪ್ರಯಾಣ ಮಾಡಿದ್ದು ಮರೆಯಲಾಗದ್ದು.. ಎಲ್ಲರಿಗಿಂತ ಮುಂದೆ ಹೋಗುತಿದ್ದ ನಮ್ಮ ಕಾರ್ ಗೆ ಮಾತ್ರ ಕಾಡುಹಂದಿ ಕಂಡಿದ್ದು. ಕಾರ್ ನೆಲ್ಲಾ ಆಫ್ ಮಾಡಿ,ಇನ್ನೇನು ಫೋಟೋ ತೆಗೀಬೇಕು ಅಂತ ಇರುವಾಗ ಯಾರೋ ಬಿಹಾರ್ ಯುವ ಜೋಡಿ ಕಾಡಿನ ಬಗ್ಗೆ ಒಂಚೂರು ಕಾಳಜಿ ಇಲ್ಲದೆ ಹಾರ್ನ್ ಮಾಡುತ್ತಾ ಬೈಕ್ ಹೊಡಿಸಿಕೊಂಡು ಹೋದಾಗ, ಹಂದಿ ಕಾಡಿನ ಒಳಗೆ ಹೊಡೀತು. ಮುಂದೆ ಇದೆ ಜೋಡಿ ಬೈಕ್ ನಿಲ್ಲಿಸಿ ಸಿಗರೇಟ್ ಸೇದುತ್ತಾ ನಿಂತದ್ದನ್ನು ನೋಡಿ ನಮ್ಮ ಕಾರ್ ಅಲ್ಲಿ ಇರುವವರು ಇಲ್ಲೆಲ್ಲಾ ಸಿಗರೇಟ್ ಸೇದಬಾರದು ಬೆಂಕಿ ಬೀಳಬಹುದು ಎಂದು ಬುದ್ದಿ ಹೇಳಲು ಹೋದ ನಮಗೆ ಆವಾಜ್ ಹಾಕಲು ಬಂದಾಗ ನಾನು ಹಾಕಿರುವ ಡ್ರೆಸ್ ನೋಡಿ ಯಾರೋ ಫಾರೆಸ್ಟ್ ಆಫೀಸರ್ ಇರಬಹುದು ಎಂದು ಪಲಾಯನ ಮಾಡಿದ್ದು ನೋಡಿ ಪರವಾಗಿಲ್ಲ ನನಗೂ ಆಫೀಸರ್ ಆಗುವ ಲಕ್ಷಣಗಳು ಇವೆ ಎನಿಸಿ ನಗು ಬಂತು..
ಅರಣ್ಯ ಸಫಾರಿ, ಕಾಡು ಪ್ರಾಣಿಗಳ ದರ್ಶನ. ಕಾಡುಹಂದಿ, ಕಾಡುಕೋಣ, ಕಾಡುಕೋಳಿ, ಜಿಂಕೆ, ಎಲ್ಲಾವನ್ನು ನೋಡಿ ನನಗನಿಸಿದ್ದು, (ಬೇರೆಯವ್ರಿಗೂ ಅನಿಸಿರ ಬಹುದು) “ಜಿಂಕೆಗಳು ಎಂಥಾ ಸಾದು ಪ್ರಾಣಿ ಆಡು ಕುರಿ ಗಳ ಹಾಗೆ ಇವು ಊರಲ್ಲೇ ಇರಬಹುದಿತ್ತಲ್ಲಾ ಹುಲಿಸಿಂಹಕ್ಕೆ ಹೆದರಿ ದಿನ ದೂಡುವುದೇಕೆ ಎನಿಸಿತ್ತು.”
ಅಂತೂ ಇಂತೂ ಕೊನೆಗೂ ಎಲ್ಲಾ ಒಂದು ಕಡೆ ಸೇರಿ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡೆವು. ಇಲ್ಲಿ ಒಂದು ಕಡೆ ಬಿಟ್ಟರೆ ಗ್ರೂಪ್ ಫೋಟೋಕ್ಕೆ ಒಟ್ಟಾಗಿ ನಾವು ಎಲ್ಲೂ ಸೇರಲೆ ಇಲ್ಲ.
ಇಲ್ಲಿಂದ ಒಬ್ಬಬ್ಬರೇ ಬ್ಯಾಂಗಲುರ್ ಕಡೆ ಪ್ರಯಾಣ ಬೆಳೆಸಿದರು.
ಮತ್ತೆ ಫಾರ್ಮ್ ಹೌಸ್ ತಲುಪಿದಾಗ, ರಾತ್ರಿ ೮ಗಂಟೆ, ಎಲ್ಲಾ ಸೇರಿ ಕಿವುಡ ಮೂಗರ ಆಟವಾಡುವಾಗ ನನಗೆ ಹೋಗಿ ಸೇರಬೇಕಿನಿಸಿದರುದೇಹದ ಸುಸ್ತು ಅವಕಾಶ ಕೊಡಲಿಲ್ಲ, ಮಲಗಿದಲ್ಲಿಂದಲೇ ಹೊನ್ನೆಮರಡು ಟ್ರಿಪ್ ಅಲ್ಲಿ ನಮ್ಮ ದೀಪು sirish ge ನಾವೆಂದೂ ಕೇಳರಿಯದ” ಶ್ರೀ ಶ್ರೀ ------ ---- ಮಹಾತ್ಮೆ”,ಸಿನಿಮಾ ಹೆಸರನ್ನು ಕೊಟ್ಟು ಕಾಡಿದ ಆಟ ಮರುಕಳಿಸಬಹುದೋ ಎಂದು ಕಾದೆ, ಅಂತ ಯಾವುದೇ ಪ್ರಯಾಸದ ಸಿನಿಮಾದ ಹೆಸರು ಕೇಳಲಿಲ್ಲ.
ರಾತ್ರಿ ಎಲ್ಲಾ ಒಟ್ಟಿಗೆ ಊಟಕ್ಕೆ ಕೂತು bangalore ನಿಂದ ಬಂದ ೨೬ ಜನರಲ್ಲಿ,ಇರುವವರ ಲೆಕ್ಕ ಹಾಕಿದಾಗ ಇದ್ದದ್ದು ಬರೀ ೧೭, ಅದರಲ್ಲಿ ಕೆಲವರು ಅರ್ಲೀ ಮಾರ್ನಿಂಗ್ ಹೋಗುವುದಕ್ಕೆ ರೆಡಿ ಆಗುತಿದ್ದರು. ಮಲಗಿಕೊಳ್ಳಿ ನೀವೆಲ್ಲ ಬೇಗ ಹೋಗಬೇಕು ಎಂದರೂ, ರಾತ್ರಿ ೧-೩೦ ರ ವರೆಗೂ ಸಚಿನ್ ಗೆ ಭಾರತ ರತ್ನ ಕೊಟ್ಟ ವಿಷಯವಾಗಿ whatsup ಅಲ್ಲಿ ಚರ್ಚೆ, ಆ ಚರ್ಚೆ ಇವತ್ತಿನ ವರೆಗೂ ಮುಗಿದಿಲ್ಲ, ಮುಗಿವುದುಇಲ್ಲಾ ಎನಿಸುತ್ತೆ.
ಮರುದಿನ ನಮ್ಮ ಕಾರ್ ನವರು ಫಾರ್ಮ್ ಹೌಸ್ ಬಿಟ್ಟಾಗ ಬೆಳಗ್ಗೆ ೧೦-೩೦, ಅಲ್ಲಿಂದ ಬರುವಾಗ ಮಾರ್ಗ ಮದ್ದ್ಯದಲ್ಲಿ ಸಿಗುವ ಗುಂಡಾಲ್ಡ್ಯಾಮ್ ತಲುಪಿದಾಗ ೧೧-೩೦ ಏನನ್ನು ಅಪೇಕ್ಷಿಸದೆ ಸುಮ್ಮನೆ ನೋಡಲು ಹೋದ ನಮಗೆ ಅಲ್ಲಿನ ನಿಸರ್ಗ ಸೌದರ್ಯ ಕಂಡು ಅಯ್ಯೋಎಲ್ಲರನ್ನೂ ಕರೆತರಲಿಲ್ಲವೇಕೆ ಅನ್ನಿಸದೆ ಇರಲಿಲ್ಲ, ಅಲ್ಲಿ ಇದ್ದದು ನಮ್ಮ ಕಾರ್ ನಲ್ಲಿ ಇರುವವರು ಮಾತ್ರ. ಬೆಟ್ಟಗಳ ನಡುವೆ ಭೂಮಿಗೆಹತ್ತಿರವಾಗಿ ತೇಲುವ ಮೋಡಗಳು, ನೀರಿನಲ್ಲಿ ಬೆಟ್ಟಗಳ reflection ಆದ್ಭುತ.
ಇರುವ ನಾವು ೪ ಜನರೇ ಫೋಟೋ ತೆಗಿಸಿಕೊಂಡು ದಾರಿಯಲ್ಲಿ ಸಿಕ್ಕ ಡಾಬಾ ದಲ್ಲಿ ಊಟ ಮಾಡಿ ದೀಪಕ್ ಕೈಯಲ್ಲಿ ಕಾರ್ ಓಡಿಸಲುಕೊಟ್ಟು, ನಿದ್ದೆ ಬಂದತಾಗಿ ಕಣ್ಣುಮುಚ್ಚಿದಾಗ ಹೊನ್ನೆಮರಡು ಟ್ರಿಪ್ ಗೆ ಬಂದ, ಮಂಜು, ಸೋಮ, ಶಶಿ, ರವಿ, ಅಂಜನ್ ವಾಲೀ, ದೀಪು, ಇದ್ದರೆ ಇನ್ನೂ ಚೆನ್ನಾಗಿತ್ತು ಎನಿಸಿತು, ಟ್ರಿಪ್ ಮುಗಿದೇ ಹೋಯಿತಲ್ಲ ಎಂದು ಬೇಸರವಾದರೂ ನಾವು ಫ್ಯಾಮಿಲೀ ಕೇರ್ ಗೆ ಮತ್ತು ನಮ್ಮ ರೆಸ್ಟ್ಗೇಂದು ಸಿಗುವ ವರ್ಷದ ಯಾವುದಾದರೂ ಒಂದು ಅಥವಾ ಎರಡು ವೀಕ್ ಎಂಡ್ ಗಳನ್ನು ಅವಿರತ ಈ ತರದ ಕೆಲಸಗಳಿಗೆ ಮೀಸಲು ಇಟ್ಟರೆ ನಾಡು ನುಡಿ ಪರಿಸರಕ್ಕೆ ಎಂತೆಂಥಾ ಕೆಲಸಗಳನ್ನು ಮಾಡಬಹುದು ಎನಿಸಿತ್ತು. ಹಾಗೆ ನಿದ್ದೆ ಬಂದು ಕಣ್ಣು ಬಿಟ್ಟಾಗ ಅದೇ ಬ್ಯಾಂಗಲುರ್, ಅದೇ ಗಿಜಿಗುಡುವ ವಾಹನ ಸಂಚಾರ, ಅದೇ ಕಲರ್ ಫುಲ್ ಮಾಲ್ಗಳು…………………………...
ಈ ಪ್ರಾಜೆಕ್ಟ್ ನ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಡಾಕ್ಟರ್ ಕೇಶವವರಿಗೆ ಸೇರಬೇಕು. ತಂದೆಯ ಆರೋಗ್ಯದ ಬಗ್ಗೆ ಗೊತ್ತಿದ್ದೋ ಗೊತ್ತಿಲ್ಲವೋ ಅವರು ತೋರಿದ ಕಾರ್ಯವೈಕರಿ ಮೆಚ್ಚಲೇ ಬೇಕು.
ಇನ್ನು Women ಆಫ್ ದ ಪ್ರಾಜೆಕ್ಟ್ MRS. ಮಧು ಅವರಿಗೆ ಸೇರಬೇಕು, ಡಾಕ್ಟರ್ ಹರ್ಷ ಅಲ್ಲಿವರಿಗೂ ಬಂದು ಆರೋಗ್ಯ ಸರಿ ಇರದೆ ಕಾರ್ನಲ್ಲಿ ಮಲಗಿದಾಗ ಒಂದು ಕಡೆ ಗಂಡನ takecare ಮಾಡುತ್ತಾ ಹಳ್ಳಿ ಹಳ್ಳಿ ಗೆ ಡ್ರೈವ್ ಮಾಡುತ್ತಾ ಹೋಗಿ ಮಕ್ಕಳನ್ನು ಕರೆತಂದು ಅವರಆರೋಗ್ಯ ತಪಾಸಣೆ ಯಲ್ಲಿ ತೋರಿದ ಕಾರ್ಯವೈಕರಿ ಗೆ. ಮ್ಯಾನ್ ಆಫ್ ಸೀರೀಸ್. ಹರೀಶ್ ಮತ್ತು ಫ್ಯಾಮಿಲೀ ಗೆ ಸೇರಬೇಕು.