Thursday, December 17, 2015

ರಂಗವಲ್ಲಿ...

ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ರಂಗ ಗೀತೆಗಳ ಕಾರ್ಯಕ್ರಮವೊಂದು,  ಮುಂದಿನ ತಿಂಗಳು ಜನವರಿ 2 ರಂದು ಎಲ್ಲ ಅಡೆತಡೆಗಳ ನೀಗಿ ನಡೆಯಲಿದೆ. ಅದೇ "ರಂಗವಲ್ಲಿ".., ವಿಶೇಷ ಸಂಗೀತ ಸಂಜೆ..!

ಇಬ್ಬರು ರಂಗಕರ್ಮಿ, ಸಾಹಿತಿ, ಕವಿಗಳಾದ ಶ್ರೀ ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ಆಯ್ದ ಅಪರೂಪದ ಮಧುರವಾದ ರಂಗ ಗೀತೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ ಉದಯೋನ್ಮುಖ ಗಾಯಕ, ನಲ್ಮೆಯ ಗೆಳೆಯ ರಾಮಚಂದ್ರ ಹಡಪದ್ ಮತ್ತು ತಂಡದವರು.

ನಮ್ಮಅವಿರತ ತಂಡದ ಮತ್ತೊಂದು ಸದಭಿರುಚಿಯ ಈ ಕಾರ್ಯಕ್ರಮಕ್ಕೆ ದೃಶ್ಯ ಕಾವ್ಯ ತಂಡದವರು ಕೈ ಜೋಡಿಸಿದ್ದಾರೆ.

ಈ ರಂಗ ಸಂಭ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ..

ಸ್ಥಳ :
ಸಂಸ ಬಯಲು ರಂಗಮಂದಿರ,
ರವೀಂದ್ರ ಕಲಾಕ್ಷೇತ್ರ ಆವರಣ,
ಜೆ.ಸಿ. ರಸ್ತೆ, ಬೆಂಗಳೂರು.

ದಿನಾಂಕ: 02 ಜನವರಿ 2016

ದಯವಿಟ್ಟು ಇಂದೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿರಿ.

ನಿಮ್ಮ ನಿರೀಕ್ಷೆಯಲ್ಲಿ,
ಅವಿರತ ತಂಡ...

Monday, September 21, 2015

"ನಾನು ಅವನಲ್ಲ ಅವಳು"

ಸ್ನೇಹಿತರೆ,

ಅವಿರತವು ಇದೆ ರವಿವಾರ, ಬಿ. ಎಸ್. ಲಿಂಗದೇವರು ನಿರ್ದೇಶನದ, ರವಿ ಗರಣಿ ನಿರ್ಮಾಣದ, ಸಂಚಾರಿ ವಿಜಯ ಅಭಿನಯದ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದ "ನಾನು ಅವನಲ್ಲ ಅವಳು" ಚಿತ್ರದ ವಿಶೇಷ ಪ್ರದರ್ಶನ ಹಾಗೂ ಚಿತ್ರ ತಂಡದೊಂದಿಗೆ ಸಂವಾದವನ್ನು ಸವಿತಾ ಚಿತ್ರಮಂದಿರದಲ್ಲಿ ಏರ್ಪಡಿಸಿದೆ.

ದಿನಾಂಕ: 27 ಸೆಪ್ಟೆಂಬರ್ 2015 ಭಾನುವಾರ

ಸಮಯ : ಮಧ್ಯಾಹ್ನ 2.30ಕ್ಕೆ
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.

ಬನ್ನಿ, ನಮ್ಮ ಜೊತೆ ಸೇರಿ. ಒಂದು ಒಳ್ಳೆಯ ಚಿತ್ರವನ್ನು, ಚಿತ್ರ ತಂಡವನ್ನು ಬೆಂಬಲಿಸೋಣ..!!


Aishwarya S Murthy ಅವರ, ಅವಧಿಯಲ್ಲಿ ಪ್ರಕಟಿಸಿದ ಈ ಚಿತ್ರದ ವಿಮರ್ಶೆಯನ್ನು ನೋಡಿ.

Monday, June 1, 2015

"ಅವಿರತ ವನಮಹೋತ್ಸವ"

ಉಸಿರಾಡುವ ಗಾಳಿಗೂ ಹಸಿರಿನ ನೆರವು ಬೇಕು; ತಂಪಾಗಿರಲು ಬೇರು ಬಿಟ್ಟ ಮರಗಳ ನೆರಳಿರಬೇಕು.

ಇಂದಿನ ನಮ್ಮೆಲ್ಲರ ನಗರ ಕೇಂದ್ರಿತ ಆಡಂಬರದ ಜೀವನ ಶೈಲಿ ಮತ್ತು ನಿಸರ್ಗದ ನಿಯಮಗಳಿಗೆ ವಿರುದ್ದವಾಗಿ ನಾವು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಪ್ರಕೃತಿಯಲ್ಲಿನ ಅಸಮತೋಲನ ಹೆಚ್ಚಾಗಿದೆ. ಭೂಮಿಯ ಒಡಲನ್ನು ಬಗೆದಿರುವ ಹತೋಟಿ ತಪ್ಪಿದ ಗಣಿಗಾರಿಕೆ, ಮಿತಿ ಮೀರಿದ ವಾಹನಗಳ ಬಳಕೆ, ಕಾಡನ್ನು ಕಡಿದು ನಿರ್ಮಿಸಲಾಗುತ್ತಿರುವ ನಗರಗಳು, ಹೀಗೆ ಸುತ್ತಲೂ ಕಣ್ಣಾಡಿಸಿದರೆ ನಮಗೆ ಕಾಣುವುದು ಕೇವಲ ಕಾಂಕ್ರೀಟ್ ಕಾಡು.

ನಿಸರ್ಗದ ಜಲ ಹಾಗೂ ನೆಲದ ಒಡಲಿನಲ್ಲಿರುವ ಸಮಸ್ತ ಜೀವ ಸಂಕುಲದ ಮೇಲೆ ಪರಿಸರ ಅಸಮತೋಲದ ವ್ಯತಿರಿಕ್ತ ಪರಿಣಾಮ ಒಂದಿಲ್ಲೊಂದು ರೀತಿಯಲ್ಲಿ ಆಗುತ್ತಲೇ ಇರುತ್ತದೆ. ಈ ಪರಿಸರ ಅಸಮತೋಲನಕ್ಕೆ ಮನುಷ್ಯನ ಅವಿವೇಕದ ಹೆಜ್ಜೆಗಳೇ ಕಾರಣ, ಸೃಷ್ಟಿಯ ಜೀವಜಾಲದಲ್ಲಿ ವಿಚಾರವಂತನೆನಿಸಿಕೊಂಡ ಮನುಷ್ಯನೇ ಇವುಗಳೆಲ್ಲವನ್ನು ಉಳಿಸುವ ಹೊಣೆ ಹೊರಲೆಬೇಕಾಗಿದೆ. ತನಗೆ ಅರಿವೇ ಇಲ್ಲದಂತೆ, ತನ್ನನ್ನು ತಾನೇ ಹಿಂಸಿಸಿಕೊಳ್ಳುತ್ತಾ, ಇತರೆ ಗಿಡಮರ, ಪ್ರಾಣಿ ಪಕ್ಷಿಗಳನ್ನು ವಿನಾಶದ ಅಂಚಿಗೆ ನೂಕುತ್ತಿರುವ ಮನುಷ್ಯ ಈ ಕ್ಷಣವೇ ಎಚ್ಚೆತ್ತುಕೊಳ್ಳ ಬೇಕಾಗಿದೆ. ಇಲ್ಲದೇ ಹೋದಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಕೋಪಗಳಿಗೆ ಮನುಷ್ಯ ಮೂಕ ಪ್ರೇಕ್ಷಕನಾಗಿ, ಜೀವ ಸಂಕುಲದ ವಿನಾಶಕ್ಕೆ ಸಾಕ್ಷಿಯಾಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ, ’ಅವಿರತ ಪ್ರತಿಷ್ಟಾನ’ವು ಪ್ರಕೃತಿಯ ಕರೆಗೆ ಓಗೊಟ್ಟು, ಪರಿಸರ ಸಂರಕ್ಷಣೆಯ ಮಹದಾಕಾಂಕ್ಷೆಯ ಬೆನ್ನೇರಿ, ಎಳೆ ಚಿಗುರುಗಳ ಸವಾರಿ ನಡೆಸಲು, ’ವನ ಮಹೋತ್ಸವ’ ಕಾರ್ಯಕ್ರಮವನ್ನು 'Oracle' ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಇದು ಒಬ್ಬರ ಯೋಚನೆಯೋ, ನೂರು ಜನರ ಆಸೆಯೋ, ಸಾವಿರ ಜನರ ಶ್ರಮವೋ; ಒಟ್ಟಿನಲ್ಲಿ ಸಾಮೂಹಿಕವಾಗಿ ನಡೆಯಲೇ ಬೇಕಾದ ಒಂದು ಹಸಿರು ಕ್ರಾಂತಿ.

ಬನ್ನಿ, ಸ್ವಾರ್ಥದಿಂದಾಲೂ ಸರಿ, ನಿಸ್ವಾರ್ಥದಿಂದಾಲೂ ಸರಿ ಈ ವನ ಮಹೋತ್ಸವದಲ್ಲಿ ಕೈ ಜೋಡಿಸಿ. ನೆನಪಿಡಿ, ಇದು ಕೇವಲ ಹಸಿರಿನ ವಿಷಯವಲ್ಲ, ನಿಮ್ಮ, ನಮ್ಮ, ಈ ಜಗತ್ತಿನ ಜೀವ ಸಂಕುಲದ ಉಸಿರಿನ ವಿಷಯ.

ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ
ದಿನಾಂಕ: 7 ಜೂನ್ 2015,
ಭಾನುವಾರ ಸಮಯ: ಬೆಳಿಗ್ಗೆ 9 ಘಂಟೆ

ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.

Friday, May 15, 2015

Aviratha Notebook Donation Drive 2015

Dear Folks,

Try to be a rainbow in someone's cloud…

We all are busy in our own world of family, friends, relatives & office..!! We always do anything & everything to ourselves. Rarely do we find time to get involved in social activities..! And this doesn't mean that we are not intended to do such work. Sometimes we wait for an opportunity to be there & to be part of such happy moments..!

With Aviratha, you can give back to society..!!

"Aviratha" conducts "Notebook Donation Drive" every year. Even though Government is supplying Text books to all students, there is a need of helping students with Notebooks and Bags. We donate notebooks & other materials to village school students (All class). And we believe it’s our responsibility to encourage parents to bring their children to school..!! Aviratha is making such an attempt to backup & uphold our education system at villages & remote areas.

In 2012, we have distributed more than 1 lack notebooks & nearly 35 computers by setting up a lab to 15,000 students across 15 districts of Karnataka.

In 2013, donated 1,40,000 notebooks to 25,000 students and In 2014, distributed 1,50,000 notebooks to 27,000 students across 15 districts of Karnataka.

This is 7th year in a row for NBD. This time we are aiming to donate 1, 60,000 notebooks to 29,000 students across 15 districts of Karnataka.

Now, you can also be part of this drive & feel proud to be involved in good cause. Do encourage and support us in this initiative by your kind contribution. Every penny given to this Drive will be utilized 100% to the said purpose. We, members of Aviratha take full responsibility to handover study materials to students directly to avoid any kind of misuse & loss of goods.

All donations are subjected to Income Tax Exemption under 80G.

Be Social, Be Generous, Be Supportive..! Come & Join Your Hands with Aviratha...!

Saturday, April 4, 2015

ಬೇಂದ್ರೆ ಬೆಳಗು

ಬಾ ಬಾರೋ, ಬಾರೋ ಬಾರೋ
ಬಾರೋ ಕಲಾ ಸೌಧಕ್ಕ, ಹೊರಳಿ ನಮ್ಮೀ ಅವಿರತಕ್ಕ...

ಬೇಂದ್ರೆ ಸೆಳೆಯುವ ಮಾಯಕ್ಕೆ,
ಬೇಂದ್ರೆ ಕಟ್ಟಿದ ಭಾವಕ್ಕೆ,
ಬೇಂದ್ರೆ ಬೆಡಗಿನ ಬೆಳಗಿಗೆ,
ಬೇಂದ್ರೆ ಸಾಹಿತ್ಯ ಸಂಭ್ರಮಕ್ಕೆ,
ಚಂದದ ಸಂಗೀತ ರಾಗವೊಂದು ಬಿದ್ದಿದೆ
ಕೇಳುವ ಸುಖ ಬೇಡ ಯಾರಿಗೆ?

ನಗರ ಜನವೇ ಬರಲಿದೆ,
ಶ್ರೋತೃಗಳಿಗೆ ಸು ಕರಣವಿದೆ,
ಅರಸಿಕನಿಗೂ ಆಲಾಪ ಸೆಳದಿದೆ,
ಗಾಯನಕ್ಕೆ ರಾಗವು ತುಂಬಿದೆ,
ಸಂಗೀತ ಪ್ರೇಮಿಗಳು ಮನೆಯಿಂದ ಎದ್ದರೊ,
ಬೇಂದ್ರೆ ಬೆಳಗು ಬೆರಗಲಿದೆ.

ಕವಿತೆ ಕಡಲಿಗೂ ಹರಿದಿದೆ,
ಗುಡ್ಡದ ಮರದೊಳೂ ಕೇಳಿದೆ,
ಮಾಸ್ತರ ಮಾಯೆ ಎಲ್ಲೂ ಹರಡಿದೆ,
ಬೇಸರ ಇಲ್ಲಿಂದ ಕಾಲ್ಕಿತ್ತಿದೆ,
ಹೇಳೊ ಸ್ನೇಹಿತ, ಬೇರೆ ಎಲ್ಲಿ
ಈ ರೀತಿ ನಲಿವ ಪಡಿವೆ..!!

Tuesday, March 10, 2015

"ಬೇಂದ್ರೆ ಕಾವ್ಯ – ಕಾರ್ಯಾಗಾರ"

ಆತ್ಮೀಯ ಸಾಹಿತ್ಯಾಸಕ್ತರೇ.,


ಏಪ್ರಿಲ್ ೫ಕ್ಕೆ ಕೆ.ಎಚ್ ಕಲಾಸೌಧ ದಲ್ಲಿ ಬೇಂದ್ರೆ ಕಾವ್ಯ ಗಾಯನ "ಬೇಂದ್ರೆ ಬೆಳಗು” ಕಾರ್ಯಕ್ರಮ ಇದ್ದರೆ ಇದರದೇ ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ "ಬೇಂದ್ರೆ ಕಾವ್ಯ – ಕಾರ್ಯಾಗಾರ" ಏಪ್ರಿಲ್ 12, ಭಾನುವಾರದಂದು.



ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ ಭೂಮಿಕೆಯನ್ನು ವಹಿಸಬೇಕಾಗುತ್ತೆ. ಈ ಶಿಬಿರದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಮತ್ತು ಇತರ ಸಾಮಾನ್ಯ ಶಿಬಿರಾರ್ಥಿಗಳಿಗೆ ಹಿರಿಯ ಸಾಹಿತಿಗಳ ಜತೆಗಿನ ಸಂವಾದದ ಮೂಲಕ ಬೇಂದ್ರೆ ಯವರ ಕಾವ್ಯದ ಮೂಲಕ ಇತರ ಎಲ್ಲ ಕಾವ್ಯಗಳ ಬಗೆಗಿನ ಆಸಕ್ತಿ ಹೆಚ್ಚಿಸುವುದು ಮತ್ತು ಹಾಗೂ ಅಧ್ಯಯನದ ಕಡೆಗೆ ಸಾಗಲು ಸಿದ್ದಗೊಳಿಸುವುದು
ಹಾಗಾಗಿ, ನಾವು ಕಳಿಸುವ ಬೇಂದ್ರೆಯವರ ಕವಿತೆಗಳನ್ನು ಶಿಬಿರಕ್ಕೆ ಬರುವ ಮುನ್ನ, ಪೂರ್ವಭಾವಿಯಾಗಿ ಓದಿಕೊಂಡು ಬಂದಿರಬೇಕಾಗುತ್ತದೆ. ಶಿಬಿರದ ದಿನ, ಆ ಕವನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು, ಆಲೋಚನೆಗಳನ್ನು (8-10 ಸದಸ್ಯರ) ಸಣ್ಣ ತಂಡಗಳಲ್ಲಿ ಪರಸ್ಪರ ಚರ್ಚೆ ಮಾಡಬೇಕಾಗುತ್ತೆ. ನಂತರ ಆ ತಂಡದ ಒಟ್ಟು ಅಭಿಪ್ರಾಯವನ್ನು ಮಂಡಿಸಬೇಕಾಗುತ್ತದೆ. ಶಿಬಿರದ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳ ನಡುವಿನ ಚರ್ಚೆಯನ್ನು ನಿಭಾಯಿಸುತ್ತಾ, ಕೃತಿಯೊಳಗಿನ ಲೇಖಕರ ಆಲೋಚನ ಕ್ರಮದ ಬಗ್ಗೆ ಪರಿಚಯಿಸುತ್ತಾ, ಚರ್ಚೆ, ವಿಚಾರ ವಿನಿಮಯ ಸಾಗಬೇಕಿರುವ ದಾರಿಯ ಮಾರ್ಗದರ್ಶನ ಮಾಡುತ್ತಾರೆ. 



ಶಿಬಿರದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಶಿಬಿರಾರ್ಥಿಗೂ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಬೇಕಾಗಿರುವುದರಿಂದ ಈ ಸಾಹಿತ್ಯ ಶಿಬಿರ ಕೇವಲ 40 ಜನ ಶಿಬಿರಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಕೋರುತ್ತೇವೆ.



ಶಿಬಿರದ ದಿನಾಂಕ: 12 ಏಪ್ರಿಲ್ 2015 , ಭಾನುವಾರ
ಸ್ಥಳ: ಸರ್ಕಾರಿ ವಿಜ್ಣಾನ ಕಾಲೇಜು, ಕೆ.ಆರ್.ಸರ್ಕಲ್ ಬಳಿ, ನೃಪತುಂಗ ರಸ್ತೆ, ಬೆಂಗಳೂರು.



ಶಿಬಿರದ ವಿನ್ಯಾಸ:
ಶಿಬಿರದ ಕಾರ್ಯಕ್ರಮಗಳು ಈ ಕೆಳಗಿನಂತೆ 04 ಭಾಗಗಳಲ್ಲಿ ನಡೆಯುತ್ತದೆ.
09:30 – 11:00 AM 
11:30 – 01:00 PM
02:00 – 3:30 PM
04:00 – 5:30 PM 



ಪ್ರತಿ ಭಾಗದಲ್ಲಿ ಆಯ್ದು ಮೊದಲೇ ನಿಗದಿಪಡಿಸಿದ ಒಂದು ಅಥವಾ ಎರಡು ಕವಿತೆಗಳ ಸಂವಾದ, ವಿಚಾರ ವಿನಿಮಯ ಇರುತ್ತದೆ.90 ನಿಮಿಷಗಳ ಅವಧಿಯ ವಿಂಗಡಣೆ ಹೀಗಿರುತ್ತದೆ:
  • ಮೊದಲ 20 ನಿಮಿಷ – ಪ್ರತಿ ತಂಡಗಳ ಚರ್ಚೆ / ವಿನಿಮಯ.
  • ನಂತರದ 30 ನಿಮಿಷ – ಪ್ರತಿ ತಂಡದಿಂದ ಆಯ್ದ ಒಬ್ಬ ಶಿಬಿರಾರ್ಥಿ 5-6 ನಿಮಿಷಗಳಲ್ಲಿ ಅವರ ಒಟ್ಟೂ ಅಭಿಪ್ರಾಯ ಮಂಡಿಸುವುದು · ಕಡೆಯ 40 ನಿಮಿಷ – ಆ ಕವನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ ಮತ್ತು ಶಿಬಿರಾರ್ಥಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯೆ.

ಸೂಚನೆಗಳು:
೧) ಶಿಬಿರದಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡವರಿಗೆ ಕವನಗಳನ್ನು ಮೈಲ್ ಮೂಲಕ ತಲುಪಿಸಲಾಗುವುದು.
೨) ಶಿಬಿರದಲ್ಲಿ ಈ ಕೃತಿಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಇದ್ದು. ಎಲ್ಲರು ಪಾಲ್ಗೊಳ್ಳಬೇಕು.
೩) ಚರ್ಚೆಯಲ್ಲಿ ಯಾರನ್ನು ವೈಯುಕ್ತಿಕವಾಗಿ ನಿಂದನೆ ಮಾಡಬಾರದು ಮತ್ತು ಮುಕ್ತವಾಗಿ ಇನ್ನೊಬರ ಆಲೋಚನೆಗಳನ್ನು ಕೇಳಿಸಿಕೊಳ್ಳುವ ಮನೋಭಾವ ಇರಬೇಕು.
೪) ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬರಬೆಕು. ನಡುವೆ ಬಂದು ಸೇರುವ ಅಥವಾ ಎದ್ದು ಹೋಗುವ ಅವಕಾಶ ಇರುವುದಿಲ್ಲ.
೫) ಪೂರ್ತಿ ದಿನದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿದ್ದವರು ಮಾತ್ರ ಬರಬೇಕು.



ಈ ಶಿಬಿರದಲ್ಲಿ ಭಾಗವಹಿಸುವವರು ದಯವಿಟ್ಟು ತಮ್ಮ ಹೆಸರು , ವಿದ್ಯಾಭಾಸ , ವೃತ್ತಿಯ ಸ್ವ-ವಿವರಗಳ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಈ ಕೆಳಕಂಡ ಈ-ಮೈಲ್ ವಿಳಾಸಗಳಿಗೆ ಕಳುಹಿಸಬೇಕಾಗಿ ವಿನಂತಿಸುತ್ತೇವೆ.



ಪ್ರಸನ್ನ ಲಕ್ಷ್ಮೀಪುರ: prasanna.lakshmipura@gmail.com 
ಸತೀಶ್ ಗೌಡ: kts_gowda@yahoo.com
ಅಶ್ವತ್ಥ : ashwathshikaripur@yahoo.com



Monday, March 9, 2015

ಬೇಂದ್ರೆ ಬೆಳಗು

"ಬೇಂದ್ರೆ" ಅನ್ನೊದ್ರಾಗ ಏನೊ ಖುಷಿ ಅದ..ನಮ್ಮ ಮಾಸ್ತರ ಬರೀ ಕವಿ ಅಲ್ಲ್ರೀ.. ಅವರೊಬ್ಬ ಮಹಾ ಶಬ್ದ ಗಾರುಡಿಗ ಅದಾರ. ಅವ್ರು ಸಾಹಿತ್ಯದಾಳಕ್ಕ ಇಳಿದಷ್ಟು ಬ್ಯಾರೆ ಯಾರು ಇಳ್ಯಾಕ ಆಗಿಲ್ಲ. ನಮ್ಮ ಈ ಯುಗದ ಕವಿ ಬಗ್ಗೆ ನಾವು ಒಂದು ಕಾರ್ಯಕ್ರಮ ಮಾಡ್ಲಿಕತ್ತೀವಿ. ಬೇಂದ್ರೆ ಕಾವ್ಯಧಾರೆಯ ಸವಿ ನೀವು ಚೂರು ಅನುಭವಿಸ್ರಿ. ತಪ್ಪದಾ ಬರ್ರಿ.

Saturday, February 14, 2015

ಹಿರಿಯ ನಾಗರೀಕರ ನಡಿಗೆ

"ನಾವು ಹಿರಿಯರು, ನೀವು ಕಿರಿಯರು...ಕೂಡಿರಲು ಚೈತನ್ಯವದು ಅಪ್ರತಿಮ"
ಈ ಶನಿವಾರ ಎಂದಿನಂತೆ ಮಾಮೂಲಿಯಾಗಿರದೆ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಯುವಕರೂ ನಾಚುವಂತೆ ಹಿರಿಯರು ಅದಮ್ಯ ಉತ್ಸಾಹದೊಂದಿಗೆ ಓಟ/ನಡಿಗೆಯಲ್ಲಿ ಭಾಗವಹಿಸಿದ್ದು.
ವಯಸ್ಸು ದೇಹಕ್ಕೆ ಹೊರತು ಮನಸ್ಸು ಹಾಗೂ ಉತ್ಸಾಹಕ್ಕಲ್ಲ ಎಂಬ ಸಂದೇಶವನ್ನು ತಮ್ಮ ಪಾಲ್ಗೊಳ್ಳುವಿಕೆಯಿಂದ ಸಾರಿ ಹೇಳಿದರು. ೮೫ಕ್ಕೂ ಮೇಲ್ಪಟ್ಟ ವಯಸ್ಸಿನ ಹಿರಿಯರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದು ಅಚ್ಚರಿಯ ಸಂಗತಿ.
ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ ಆಯೋಜಿಸಿದ್ದ ೧.೫ ಕಿಮೀ ದೂರದ "ಹಿರಿಯ ನಾಗರೀಕರ ನಡಿಗೆ/ ಓಟದಲ್ಲಿ" ಬೆಂಗಳೂರು ಹಾಗೂ ಸುತ್ತಮುತ್ತಲಿಂದ ಬಂದ ಸುಮಾರು ೩೫೦ಕ್ಕೂ ಹೆಚ್ಚು ಹಿರಿಯರು ಭಾಗವಹಿಸಿದ್ದರು. ಮನಸಾರೆ ಖುಷಿಪಟ್ಟು, ಕಿರಿಯರ ಬೆಂಬಲವನ್ನು, ಪ್ರಯತ್ನವನ್ನು ಬೆನ್ನು ತಟ್ಟಿ ಶ್ಲಾಘಿಸಿದರು.
ಅವಿರತಕ್ಕೆ ಈ ಅವಕಾಶವನ್ನು ಒದಗಿಸಿದ ಹಿರಿಯ ನಾಗರೀಕರ ಒಕ್ಕೂಟಕ್ಕೆ, ನಮ್ಮ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಹಾಗೆಯೇ ಒಗ್ಗಟ್ಟಿನಲ್ಲಿ ಬಲವಿದೆ, ಯಶಸ್ಸಿದೆ ಎಂದು ತೋರಿದ, ಭಾಗವಿಸಿ ಮತ್ತು ಬೆಂಬಲಿಸಿದ ಅವಿರತದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು..!