Friday, January 22, 2016

ಮಲ್ಲಿಗೆ ಪರಿಷೆ

ಸ್ನೇಹಿತರೇ,

ಮಲ್ಲಿಗೆಯ ಪರಿಮಳ ಹರಡುತ್ತಿದೆ...ಪ್ರೇಮ ವೀಣೆ ಮತ್ತೆ ಮಿಡಿಯುತ್ತಿದೆ...!! ಇದು ಮನಸುಗಳು ಅರಳುವ ಸಮಯ..

ಅವಿರತವು, ಹೊಸ ವರುಷವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ವರ್ಷದ ಮೊದಲ ಕೊಡುಗೆ ರಂಗವಲ್ಲಿಯನ್ನು ಜನಮನ ತಲುಪಿಸಿ ಯಶಸ್ವಿಯಾಗಿದೆ.

ಅದು ರಂಗಲೋಕ ಇದು ಪ್ರೇಮಲೋಕ. ಹೌದು, ಕೆ ಎಸ್ ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಪ್ರೇಮ ಕಾವ್ಯ ಸುಗ್ಗಿಯ ಜೊತೆಗೆ ಚಿಕ್ಕದಾದ ವಿಶೇಷ ಮಲ್ಲಿಗೆ ಪರಿಷೆಯನ್ನು ಪ್ರಸ್ತುತಪಡಿಸುತ್ತಿದೆ.

ವಿನಯ ನಾಡಿಗ್ ಮತ್ತು ಸಂಗಡಿಗರ ಧ್ವನಿಯಲ್ಲಿ ಅರಳಲಿವೆ ಕೆ.ಎಸ್.ಎನ್ ಅವರ ಕವನ ಮೊಗ್ಗುಗಳು..! 

ಅವಿರತ ತಂಡದಿಂದ ಪ್ರೇಮ ಕವಿಯ ಸಂಭ್ರಮವನ್ನು ವಿಭಿನ್ನವಾಗಿ ಕಟ್ಟಿಕೊಡುವ, ವಿಶೇಷ ಅನುಭವವನ್ನು ನೀಡುವ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ  ಅತ್ಯಗತ್ಯ..!

ಬನ್ನಿ, ಈ ಮಲ್ಲಿಗೆ ಪರಿಷೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ..!

ನಿಮ್ಮ,
ಅವಿರತ ತಂಡ.