Monday, November 17, 2014

ಕರ್ನಾಟಕ ರಾಜ್ಯೋತ್ಸವ ಆಚರಣೆ- ರಾಧಿಕಾ

ಅವಿರತ ತಂಡದಿಂದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೊಂಗೆ ಮರದ ನೆರಳಿನಲ್ಲಿ ಧ್ವಜಾರೋಹಣ, ನಾಡಗೀತೆ, ಹಚ್ಚೇವು ಕನ್ನಡ ಗೀತೆಗಳ ಸಮೂಹ ಗಾಯನ,  ಕನ್ನಡ ಗೀತೆಗಳ ಗಾಯನ... ಹೀಗೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.  

ಕೆಲವೇ ದಿವಸಗಳ ತಯಾರಿಯಲ್ಲಿ ಉತ್ತಮವಾಗಿ ಕನ್ನಡ ನೆಲದ ಹಿರಿಮೆಯ ಬಗ್ಗೆ ಹಾಡು ಕಲಿತು ಹಾಡಿದ ಪುಟಾಣಿಗಳಾದ ವಿಶಾಖ, ಅನನ್ಯ ಅವರ ಶ್ರಮ ಮೆಚ್ಚತಕ್ಕದ್ದು. ನಿಂತ ಕಾಲಲ್ಲೇ ಮಕ್ಕಳಿಗೆ ಕರ್ನಾಟಕದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ಉತ್ಸುಕರಾಗಿ ಭಾಗವಹಿಸಿದ ಮಕ್ಕಳೆಲ್ಲರಿಗೂ ಒಂದು ಮೆಚ್ಚುಗೆ. 

ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಬಹುತೇಕ, ಮತ್ತೊಂದು ರಜಾ ದಿನವಾಗಿ ಕಳೆದು ಹೋಗುತ್ತಿತ್ತು. ಅಬ್ಬರದ ಸಂಗೀತ,  ’ಅ’ ಕಾರ ’ಹ’ ಕಾರ ವ್ಯತ್ಯಾಸ ಗೊತ್ತಿಲ್ಲದ ಪುಢಾರಿಗಳ ಭಾಷಣ ಇವುಗಳ ನಡುವೆ ಯಾಕಪ್ಪಾ ಬರುತ್ತೆ ಈ ದಿವಸ ಅಂತ ಅನಿಸಿದ್ದೂ ಹೌದು. ಈ ಬಾರಿ ಆ ದಿನವನ್ನು ವಿಭಿನ್ನ ಹಾಗೂ ವಿಶೇಷವಾಗುವಂತೆ ಅವಿರತ ತಂಡ ಅರ್ಥಪೂರ್ಣವಾಗಿ ಆಚರಿಸಿತು.


Friday, August 29, 2014

ಮಾಯಾಲೋಕ - ತೇಜಸ್ವಿ ಹಾದಿಯಲ್ಲೊಂದು ಪಯಣ...

ಬನ್ನಿ
ತೇಜಸ್ವಿಯವರ, ಸಾಹಿತ್ಯ, ವಿಚಾರ, ವಿಜ್ಞಾನ, ಚಾರಣ, ಬೇಟೆ, ಫಿಶಿಂಗ್ ಹಾಗೂ ಇತರೆ ಆಸಕ್ತಿಕರ ವಿಷಯಗಳ ಆಪ್ತ ಮಾತು-ಕತೆಯ ಜೊತೆಗೆ, ಅವರ ಪ್ರಮುಖ ಹವ್ಯಾಸವಾಗಿದ್ದಬರ್ಡ್ ಫೋಟೋಗ್ರಫಿಬಗ್ಗೆ ಒಂದು ವಿಶಿಷ್ಟ ಕಾರ್ಯಕ್ರಮದ ಜೊತೆ ದಿನ ಸಂಜೆ ಕಳೆಯೋಣ.

ಸೆಪ್ಟೆಂಬರ್ :

ತೇಜಸ್ವಿ ಹೆಜ್ಜೆ ಗುರುತು.

.೩೦: ಕ್ಕೆ ತೇಜಸ್ವಿ ನಾನು ಕಂಡಂತೆ - ಡಾ.ಪುಟ್ಟಸ್ವಾಮಿ. ಕೆ ಬರಹಗಾರರು
.೦೦: ಕ್ಕೆ ತೇಜಸ್ವಿ ನಮ್ಮ ನಮ್ಮಲ್ಲಿ (ತೇಜಸ್ವಿ ಬಗ್ಗೆ ನಮಗೆಷ್ಟು ಗೊತ್ತು ಸಣ್ಣ ಪ್ರಶ್ನೋತ್ತರ)
.೩೦: ತೇಜಸ್ವಿ ಮತ್ತು ವೈಚಾರಿಕ ಚಿಂತನೆ - ಡಾ.ಕೆ.ವೈ.ನಾರಾಯಣ ಸ್ವಾಮಿ
.೦೦: ಪಕ್ಷಿನೋಟ (ಪಕ್ಷಿಗಳ ಛಾಯಚಿತ್ರ ಪ್ರದರ್ಶನ)

ಸ್ಠಳ : ಆರ್.ವಿ. ಟೀಚರ್ಸ್ ಕಾಲೇಜು ಜಯನಗರ ಬೆಂಗಳೂರು


ಸೆಪ್ಟೆಂಬರ್, ೧೪:

ತೇಜಸ್ವಿ ಸಾಹಿತ್ಯ - ಕಾಲುದಾರಿಯ ನೋಟ.

ತೇಜಸ್ವಿ ಸಾಹಿತ್ಯಾಸಕ್ತರಿಗೆ ಶಿಬಿರ . ಕೇವಲ ೫೦ ಜನರಿಗೆ ಮಾತ್ರ ಸೀಮಿತ.
ಶಿಬಿರಾರ್ಥಿಗಳಾಗಿ ನೊಂದಾಯಿಸಿಕೊಂಡವರಿಗೆ ಕೆಳಗಿನ ಪುಸ್ತಕಗಳಲ್ಲಿ ಆಯ್ದ ಭಾಗಗಳನ್ನು ಕೊಡುತ್ತೇವೆ ಎಲ್ಲರೂ ಪುಸ್ತಕಗಳನ್ನು ಕಡ್ಡಾಯವಾಗಿ ಓದಿಕೊಂಡು ಬಂದಿರಬೇಕಾಗುತ್ತರೆ ಅಷ್ಟು ಪುಸ್ತಕ ಸೇರಿ ಸುಮಾರು ೩೦೦ ಪುಟಗಳಿರುತ್ತವೆ

ಶಿಬಿರಾರ್ಥಿಗಳು ಕೆಳಗಿನ ಪುಸ್ತಕಗಳನ್ನು ಓದಿಕೊಂಡು ಬಂದಿರಬೇಕು

ಬೆಳಿಗ್ಗೆ ೧೦.೦೦ ರಿಂದ .೦೦ ವರೆಗೆ:
ಕಥನ
ಕರ್ವಾಲೋ
ಅವನತಿ
ಮಾಯಾಮೃಗ
ಕಿರಗೂರಿನ ಗಯ್ಯಾಳಿಗಳು

ಮಧ್ಯಾಹ್ನ .೦೦ ರಿಂದ ವರೆಗೆ:
ವೈಚಾರಿಕತೆ 
ಸಹಜ ಕೃಷಿ
ಹೊಸ ದಿಗಂತದೆಡೆಗೆ
ಕರ್ನಾಟಕ ಸಂಸ್ಕೃತಿ
ಮೇದರಳ್ಳಿ ಅವಸಾನ


ಶಿಬಿರದ ಸಂಪನ್ಮೂಲ ವ್ಯಕ್ತಿಗಳು:

ಡಾ. ಮಲ್ಲಿಕಾರ್ಜುನ ಮೇಟಿ, ಭಾಷಾ ತಜ್ಞರು ಶಿವಮೊಗ್ಗ
ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಸಹಜ ಕೃಷಿ ಮತ್ತು ಸಂಸ್ಕೃತಿ ಚಿಂತಕರು 
ಎನ್. ಸಂಧ್ಯಾರಾಣಿ, ಉಪ ಸಂಪಾದಕಿ ಅವಿಧಿ ಅಂತರ್ಜಾಲ ಪತ್ರಿಕೆ
ಡಾ. ಕೆ.ವೈ.ನಾರಾಯಣ ಸ್ವಾಮಿ, ನಾಟಕಕಾರರು

FB Event: https://www.facebook.com/events/354525064695780/

ಕಾರ್ಯಕ್ರಮದ ಉಚಿತ ಪಾಸ್ ಗಳಿಗೆ ಸಂಪರ್ಕಿಸಿ:
ರಾಜಾಜಿನಗರ
ವಿಜಯನಗರ                         ದೀಪಕ್ ಪಿ 9901053333
ನಾಗರಭಾವಿ
ರಾಜರಾಜೇಶ್ವರಿನಗರ

ಮಲ್ಲೇಶ್ವರ                            ಶಶಿಧರ ರಾಜ 9845007960
ಸದಾಶಿವನಗರ 

ಸಂಜಯನಗರ
ಆರ್.ಟಿ.ನಗರ                       ಡಾ.ಹಿಮಾಂಶು 9845988444
ಹೆಬ್ಬಾಳ

ಜಯನಗರ                          ಮಧುಸೂಧನ್ 9845394399

ಗಿರಿನಗರ                            ಶ್ರೀನಿಧಿ 9845129681

ಬಸವನಗುಡಿ                        ರೋಹಿತ್ 9945793172

ಹನುಮಂತನಗರ                  ದೀಪಕ್ 9483520306

ಗಾಂಧಿ ಬಜಾರ್                    ಹರೀಶ್ 9740390777

ಯಲಹಂಕ
ಜಾಲಹಳ್ಳಿ                           ಪ್ರಸನ್ನ ಲಕ್ಷ್ಮಿಪುರ 9880802642 
ಜೆಪಿ ನಗರ