ಅವಿರತ ತಂಡದಿಂದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೊಂಗೆ ಮರದ ನೆರಳಿನಲ್ಲಿ ಧ್ವಜಾರೋಹಣ, ನಾಡಗೀತೆ, ಹಚ್ಚೇವು ಕನ್ನಡ ಗೀತೆಗಳ ಸಮೂಹ ಗಾಯನ, ಕನ್ನಡ ಗೀತೆಗಳ ಗಾಯನ... ಹೀಗೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.
ಕೆಲವೇ ದಿವಸಗಳ ತಯಾರಿಯಲ್ಲಿ ಉತ್ತಮವಾಗಿ ಕನ್ನಡ ನೆಲದ ಹಿರಿಮೆಯ ಬಗ್ಗೆ ಹಾಡು ಕಲಿತು ಹಾಡಿದ ಪುಟಾಣಿಗಳಾದ ವಿಶಾಖ, ಅನನ್ಯ ಅವರ ಶ್ರಮ ಮೆಚ್ಚತಕ್ಕದ್ದು. ನಿಂತ ಕಾಲಲ್ಲೇ ಮಕ್ಕಳಿಗೆ ಕರ್ನಾಟಕದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ಉತ್ಸುಕರಾಗಿ ಭಾಗವಹಿಸಿದ ಮಕ್ಕಳೆಲ್ಲರಿಗೂ ಒಂದು ಮೆಚ್ಚುಗೆ.
ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಬಹುತೇಕ, ಮತ್ತೊಂದು ರಜಾ ದಿನವಾಗಿ ಕಳೆದು ಹೋಗುತ್ತಿತ್ತು. ಅಬ್ಬರದ ಸಂಗೀತ, ’ಅ’ ಕಾರ ’ಹ’ ಕಾರ ವ್ಯತ್ಯಾಸ ಗೊತ್ತಿಲ್ಲದ ಪುಢಾರಿಗಳ ಭಾಷಣ ಇವುಗಳ ನಡುವೆ ಯಾಕಪ್ಪಾ ಬರುತ್ತೆ ಈ ದಿವಸ ಅಂತ ಅನಿಸಿದ್ದೂ ಹೌದು. ಈ ಬಾರಿ ಆ ದಿನವನ್ನು ವಿಭಿನ್ನ ಹಾಗೂ ವಿಶೇಷವಾಗುವಂತೆ ಅವಿರತ ತಂಡ ಅರ್ಥಪೂರ್ಣವಾಗಿ ಆಚರಿಸಿತು.
No comments:
Post a Comment