Friday, March 11, 2016

ಅವಿರತ ಜೀವ ನಿಧಿ..

ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ "ಆರೋಗ್ಯ"ವು ಕೂಡ ಒಂದು. ಪ್ರತಿ ವರ್ಷ, ಅವಿರತವು ಹಳ್ಳಿಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದೆ ಹಾಗೇ ಮುಂದುವರೆಸುತ್ತೆ ಕೂಡ. ಮಕ್ಕಳ ಶೈಕ್ಷಣಿಕ ಕಾಳಜಿಯ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಆಸ್ಥೆ ವಹಿಸುತ್ತಿದೆ. ಈಗ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ...
ನಮ್ಮ ಕುಟುಂಬದವರೊ, ಸಂಬಂಧಿಕರೊ, ಸ್ನೇಹಿತರೊ ಅಥವಾ ನೆರೆಹೊರೆಯವರೊ ಅನಾರೋಗ್ಯ ಕಾರಣದಿಂದ ಬಳಲುತಿದ್ದಾಗ ಅವಶ್ಯಕ  ರಕ್ತ ಲಭ್ಯವಿಲ್ಲದೆ ಪರಿದಾಡಿದ, ತೊಂದರೆಗೊಳಗಾದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ.. ಅನೇಕ ಬ್ಲಡ್ ಬ್ಯಾಂಕ್ ಗಳಿದ್ದೂ, ಸ್ನೇಹಿತ & ಸಂಬಂಧಿಕರ ನೆಟ್‌ವರ್ಕ್ ಇದ್ದೂ ರಕ್ತವನ್ನು ಹೊಂದಿಸದ ಘಟನೆಗಳಿವೆ. ಇಂತಹ ಪರಿಸ್ಥಿತಿಗಳಿಂದ ಹೊರಬರಲು ಅವಿರತವು ಮೊಬೈಲ್ ಅಪ್ಲಿಕೇಶನ್ ಒಂದನ್ನು ಸಿದ್ದಪಡಿಸುತ್ತಿದೆ. ಅವಿರತ ಸದಸ್ಯ ಶ್ರೀಕಾಂತ್ ಚಕ್ರವರ್ತಿ ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸುತ್ತಿದ್ದು ಸದ್ಯದಲ್ಲೇ ಜನರಿಗೆ ತಲುಪಲಿದೆ. 
ರಕ್ತ ದಾನವನ್ನು ಮಾಡಲಿಚ್ಛಿಸುವವರು, ನಮ್ಮ ರಕ್ತದಾನಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವವರು  blooddonor.aviratha@gmail.com ಗೆ ತಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್ ವಿವರಗಳನ್ನು ಕಳುಹಿಸಬಹುದು.  ಅಗತ್ಯ ಸಮಯದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.

ಬನ್ನಿ,
ರಕ್ತವನ್ನು ನೀಡೋಣ,
ಜೀವವನ್ನು ಉಳಿಸೋಣ,
ನಗುವನ್ನು ಮೂಡಿಸೋಣ..!

ಅವಿರತದ ಜೊತೆ ನಿಮ್ಮ ಸಹಕಾರವಿರಲಿ.