Saturday, July 15, 2017

ಸಖಿಯರಿಗೆ ಅವಿರತ "ವಿದ್ಯಾರ್ಥಿ-ವೇತನ"

ಸಖಿಯರಿಗೆ ಅವಿರತ "ವಿದ್ಯಾರ್ಥಿ-ವೇತನ"
ಸಖಿ ಟ್ರಸ್ಟ್ ಮಹಿಳೆಯರ ವಿರುದ್ಧದ ತಾರತಮ್ಯ, ಲೈಂಗಿಕ ಶೋಷಣೆ, ಹಿಂಸೆ ಮತ್ತು ದಲಿತ, ಅಸ್ಪೃಶ್ಯರ ಏಳಿಗೆಗೆ ಹೋರಾಡುವ ಸಂಘಟನೆ. ದಲಿತ ಮಹಿಳೆಯರು ಹಾಗೂ ಮಕ್ಕಳಿಗೆ ಶಿಕ್ಷಣವನ್ನು ಹಾಗೂ ಸುರಕ್ಷಿತ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಸಖಿ, ಶಾಲಾ ಕಾಲೇಜುಗಳಲ್ಲಿ ದಲಿತರ ಸಮಸ್ಯಗಳನ್ನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದೆ ಅಲ್ಲದೆ ಮಾನಸಿಕ ಒತ್ತಡ, ಮದ್ಯಪಾನ ಮತ್ತು ಮಾದಕ ಸೇವೆನೆ ಅಂತಹ ವಿಷಯಗಳ ತಿಳುವಳಿಕೆಯನ್ನೂ ನೀಡುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಮಹಿಳೆಯರಿಗೆ ನೇರ ಬೆಂಬಲ ಮತ್ತು ಕಾನೂನು ನೆರವನ್ನು ಸಖಿ ಟ್ರಸ್ಟ್ ಕೊಡುತ್ತಿದೆ. ಸ್ಥಳೀಯ ಯುವತಿಯರ ಸಹಾಯದಿಂದ, ಗಣಿಗಾರಿಕೆ ಪ್ರದೇಶಗಳಲ್ಲಿ ಬಾಲಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಶೋಷಣೆ ತಡೆಯಲು ಕಾರ್ಯಕ್ರಮಗಳನ್ನು ಮಾಡುತ್ತಿದೆ.


ಸಖಿ ತಂಡದ ಮತ್ತೊಂದು ಗಮನಾರ್ಹ ಕೆಲಸವೆಂದರೆ, ದೇವದಾಸಿಯರ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದೆಯಲ್ಲದೆ ಅವರ ವಸತಿಯ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಈ ಅತ್ಯುತ್ತಮ ಕೆಲಸಕ್ಕೆ ಅವಿರತವು ಕೈ ಜೋಡಿಸಿದ್ದು ಮಕ್ಕಳಿಗೆ ಪಿಯು,ಪದವಿ ಹಾಗೂ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯದ ಹಸ್ತವನ್ನು ಚಾಚುತ್ತಿದೆ. ಕಳೆದ ವರ್ಷ ಆಯ್ದ ೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ವೇತನವನ್ನು ನೀಡಿತ್ತು, ಈ ವರ್ಷ ಆಯ್ದ ೧೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ವೇತನವನ್ನು ನೀಡುವ ಗುರಿ ಹೊಂದಿದೆ.

ಸ್ನೇಹಿತರೆ ಬನ್ನಿ, ಸ್ವಾವಲಂಬಿ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ. ನಮ್ಮ ಜೊತೆಗೂಡಿ. ಸಹಾಯ ಮಾಡಲಿಚ್ಛಿಸುವವರು ನನ್ನನ್ನು ಅಥವಾ ಸತೀಶ್.ಕೆ.ಟಿ ಅವರನ್ನು ಸಂಪರ್ಕಿಸಿ.

ಸತೀಶ್.ಕೆ.ಟಿ: ೯೮೮೦೦ ೮೬೩೦೦

ರವಿ ಕುಲಕರ್ಣಿ,
ಅವಿರತ ಪ್ರತಿಷ್ಟಾನ