Thursday, May 12, 2016

'ರಾಜ್ ರಾಗ' : ಕಾರ್ಯಕ್ರಮದ ಅನಿಸಿಕೆ-ರವಿಕುಮಾರ

"ಡಾ|| ರಾಜ್ ಕುಮಾರ್", ರಾಜ್ ಒಬ್ಬ ಅದ್ಬುತ ನಟ. ಅವರು ಅಷ್ಟೇ ಆಗಿದ್ದರೆ ಇಂದು ಆ ಹೆಸರು ಕೇಳಿದಾಗ ಆಗುವ ಪುಳಕ ಬಹುಶಃ ಆಗುತ್ತಿರಲಿಲ್ಲವೇನೋ. ರಾಜ್ ನಟನಾಗಿಯೇ ನಟನೆಗೆ ಮೀರಿ ಬೆಳೆದವರು. ಪಾತ್ರಗಳಾಗಿದ್ದುಕೊಂಡೇ ಪಾತ್ರಗಳಿಗೂ ಮೀರಿ ಅರ್ಥ ಕೊಟ್ಟವರು. ಮುಗ್ದತೆ ತೋರುತ್ತಲೇ ವಿಶ್ವಮಾನವರಾಗಿದ್ದವರು. ಕನ್ನಡಿಗ ಎಂದರೆ ಆವ ಹೇಗಿದ್ದಾನೆ ಎಂಬುದಕ್ಕೆ ರಾಜ್ ಅಪ್ಪಟ ಉದಾಹರಣೆ. ಹಾಗಾಗಿ ನಮ್ಮೆಲ್ಲಾ ಸಂಸ್ಕೃತಿಯನ್ನು ಮೈದಳೆದಂತೆ ಕನ್ನಡಿಗರಿಗೆ ಒಂದು ಸ್ವಾಭಿಮಾನದ, ಹೆಮ್ಮೆಯ 'ಐಡೆಂಟಿಟೀ' ಕೊಟ್ಟವರು ರಾಜ್. ಒಮ್ಮೆ ಕುವೆಂಪು ಅವರೇ ಹೇಳಿದಂತೆ ವಿಶ್ವ ಮಾನವ ಸಂದೇಶ ಹರಡಬಲ್ಲ ಚೇತನ ರಾಜ್ ರಿಗೆ ಇತ್ತು. ಬಹುಶಃ ಇಂದಿಗೆ ಇದು ಕೇವಲ ಹೊಗಳಿಕೆಯ ಮಾತಾಗುತ್ತಿತ್ತೇನೋ; ಅಂದು ಒಂದು ಗೋಕಾಕ್ ಚಳುವಳಿ ಆ ರೂಪ ತಾಳದಿದ್ದರೆ. ಆದರೆ ಹಾಗಿಲ್ಲ. ಕನ್ನಡಿಗರ ವಿವಿಧ ಬೇಡಿಕೆಗಳಿಗಾಗಿ ರೂಪುಗೊಂಡ ಚಳುವಳಿ ಇನ್ನೇನು ನೆಲಕಚ್ಚಿತು ಎನ್ನುವಾಗ ರಾಜ್ ಬಂದರು, ಚಳುವಳಿಯ ಮುಂದಾಳತ್ವ ವಹಿದರು, ಮುಂಚೂಣಿಯಲ್ಲಿದ್ದವರು ಕಲ್ಲುಬಂಡೆಯಂತೆ ಅವರ ಬೆನ್ನಿಗೆ ನಿಂತರು. ಕನ್ನಡಿಗರು ಒಗ್ಗೂಡಿ ನಿಂತರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು ಸಾಬೀತಾಯಿತು. ಹಾಗಾಗಲು ಆ ಏಕತೆ ಮೂಡಲು ಒಂದು ದೊಡ್ಡ ಶಕ್ತಿಯ ಅವಶ್ಯಕತೆ ಇತ್ತು. ಆ ಶಕ್ತಿಯೇ ರಾಜ್. ಪ್ರಪಂಚದ ಪ್ರತಿ ಸಂಸ್ಕೃತಿ, ಜನಸಮುದಾಯ ಒಬ್ಬ ಸಾಂಸ್ಕೃತಿಕ ನಾಯಕನನ್ನು ಬಯಸುತ್ತದೆ, ಸೃಷ್ಟಿಸುತ್ತದೆ ಮತ್ತು ಮೆರೆಸುತ್ತದೆ. ಕನ್ನಡಿಗರ ಪಾಲಿನ ಆ ನಾಯಕ ರಾಜ್ ಆಗಿದ್ದರು. ಹೇಳುತ್ತಾ ಹೋದರೆ ಪುಟ ಸಾಲದು. ಅಂತ ಮಾಹಾನ್ ಶಕ್ತಿಯನ್ನು ಮತ್ತೊಮ್ಮೆ ಮಗದೊಮ್ಮೆ ನೆನೆಯಬೇಕೆನಿಸುತ್ತದೆ.

ಹೇಗೆ??

ಉತ್ತರ ಕೊಟ್ಟವರು ಅವಿರತ ತಂಡ. ಎಷ್ಟು ನೆನೆದರೂ ನಿಲ್ಲದ ರಾಜ್ ನೆನೆಪುಗಳಿಗೆ ಹಾತೊರೆಯುವವರಿಗೆ ಅವರ ಹುಟ್ಟುಹಬ್ಬದಂದೇ ಅವರ ಬೃಹತ್ ಲೋಕದ ಒಳಗೆ ಕರೆದುಕೊಂಡು ಹೋದದ್ದು ಅವಿರತ ತಂಡ. ಅವಿರತ ಭ್ರಮೆ ತಂಡದೊಂದಿಗೆ ಕೈಗೂಡಿ ಹಮ್ಮಿಕೊಂಡ 'ರಾಜ್ ರಾಗ' ಒಂದು ವಿನೂತನ ವಿಶಿಷ್ಟ ಪ್ರಯತ್ನ. ರಾಜ್ ರ ಎಲ್ಲಾ ಬಗೆಯ ರಾಗಗಳ ಪರಿಚಯ 'ಮೇದ್ಲ್ೈ'ಗಳ ಮೂಲಕ ಆದರೆ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳ ಪ್ರಸ್ತಾಪ ಆ ರಾಗಗಳ ರಂಗೇರಿಸಿತ್ತು. ರಾಜ್ ರೆ ಮೈವೆತ್ತಿಬಂದತೆ ಆ ಘಟನೆಗಳನ್ನು ನಿರೂಪಿಸಿದ ನಿರೂಪಕ ರೋಹಿತ್ ರೋಹಿತ್ ಸ್ ಹರಿಪ್ರಸಾದ್ ಮಾತುಗಳು ಎಷ್ಟು ಕೆಳಿದಾರೂ ಸಾಲದಾಗಿತ್ತು. ಹಾಡುಗಳ ಸನ್ನಿವೇಶ ಸೃಷ್ಟಿಸಿ ಹಾಡಿ ರಂಜಿಸಿದ್ದು ವಿನೂತನವಾಗಿದ್ದರೆ, ನಾದಮಯ ಹಾಡಿಗೆ ಕೇಳುಗರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಭ್ರಮೆ ತಂಡದ ಹಾಡುಗಾರಿಕೆಗೆ ಕೊಟ್ಟ ಮೆಚ್ಚುಗೆಯಾಯ್ತು. ರಾಜ್ ರ ಮಾತುಗಳನ್ನು ಕೇಳಬೇಕೆನಿಸಿದವರಿಗೆ ನೆರವಾದದ್ದು ರಾಜ್ ಶಾರೀರ ಹೋಲುವ ಜಗದೀಶ್. ರಾಜ್ ರ ಹಿರಣ್ಯಕಷ್ಯಪುವಿನ ಪಾತ್ರ ತೊಟ್ಟ ಆರ್ಭಟಿಸಿದರು. ರಾಜ್ ಧರಿಸಿ ಮೆರೆಸಿದ ಶ್ರೀಕೃಷ್ಣ ದೇವರಾಯ (ರವಿ ಕುಲ್ಕರ್ಣೀ), ರಣಧೀರ ಕಂಠೀರವ (ಸೋಮ), ರಾಘವೇಂದ್ರ ಸ್ವಾಮಿ(ರವೀಂದ್ರ), ಒಂದು ಮುತ್ತಿನ ಕಥೆಯ ಐತ(ವೆಂಕಟ್), ಶಂಕರ್ ಗುರು( ಗುರು ಬಾ), ಬಂಗಾರದ ಮಾನುಷ್ಯದ ರಾಜಪ್ಪ (ಶಿವಲಿಂಗೆ ಗೌಡ) ,ಗಂಧದ ಗುಡಿಯ ಕುಮಾರ್ (ಸಿಯ ) ಸನಾದಿ ಅಪ್ಪಣ್ಣ (ರವಿ ಕುಮಾರ್) ಪಾತ್ರಗಳೇ ಇಂದು ಅವರರನ್ನ ಡೋಲಿಯಲ್ಲಿ ತಂದು ಮೆರೆಸಿದರು. ಕಸ್ತೂರಿ ನಿವಾಸದಲ್ಲಿ ರಾಜ್ ಜೊತೆಗಿದ್ದ ಮಗುವಿನಂತೆ ಮುದ್ದಾದ ಮನ್ವಿತ ಆಡಿಸಿ ನೋಡು ಬೀಳಿಸಿ ನೋಡು ಹಾಡಿಗೆ ಜೀವ ಕೊಟ್ಟಳು. ಇಷ್ಟೆಲ್ಲಾ ಆಗಬೇಕಿದ್ದರೆ ರಾಜ್ ನಮ್ಮೊಂದಿಗಿದ್ದರೆ ಎಷ್ಟು ಚಂದ ಅನ್ನಿಸುವ ಹೊತ್ತಿಗೆ ರಾಜ್ ದ್ವನಿಯೊಂದಿಗೆ ಸಂವಾದ. ರಾಜ್ ರ ಸುಮಾರು ೨೨ ಚಿತ್ರಗಳಿಗೆ ಸಂಗೀತ ಕೊಟ್ಟ ರಾಜನ್, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಶಿವರಾಂ ಸರ್ ನಮ್ಮೊಂದಿಗಿದ್ದು ಕಾರ್ಯಕ್ರಮದ ಸಂತಸ ಹೆಚ್ಚಿಸಿದರು. ವರ್ಣಿಸ ಹೊರಟರೆ ಕಮ್ಮಿ ಎನಿಸುತ್ತದೆ. ಇಲ್ಲಿಗೆ ನಿಲ್ಲಿಸುತ್ತೇನೆ. ಒಂದು ಧೀರ್ಘ ಉಸಿರೆಳೆದು ಮತ್ತೊಮ್ಮೆ ಕಾರ್ಯಕ್ರಮ ನೆನೆಯುತ್ತೇನೆ.
  


ಕಾರ್ಯಕ್ರಮಕ್ಕೆ ದುಡಿದ ಮಧು, ಶಶಿ ರಾಜ ಶಶಿಧರ್, ಜ್ಯೋತಿ,ರವಿಂದ್ರ,ರವಿ ಕುಲಕರ್ಣಿ, ಪ್ರಸನ್ನ ಲಕ್ಷ್ಮೀಪುರ, ಪ್ರಸನ್ನ ಲಕ್ಷ್ಮೀಪುರದೀಪಕ್ ದೀಪಕ್ ಪೀ, ಶ್ರೀಕಾಂತ್, ಕಾರ್ತಿಕ್ ಬೇಲೂರ್, ಕಿರಣ್, ಅನಿಲ್, ರಘು , ಶರತ್ ಗೌಡ, ಗುರು ಬಾ, ಹರೀಶ್,ಸಿಯ, ಮುನಿರಾಜ್, ಶಿವಲಿಂಗೇಗೌಡ, ನಂದಿನಿ, ಸುಶ್ಮ, ಪ್ರತಿಭಾ ಗೌಡ, ಶ್ರಾವಂತಿ, ವರ್ಷ, ಇಲ್ಲಿ ಹೆಸರಿಸಲೇಬೇಕಾದ ಆದರೆ ಹೆಸರು ತಪ್ಪಿರುವ ಹಲವರಿಗೆ, ಪೋಸ್ಟರ್ ವಿನ್ಯಾಸಗೊಳಿಸಿದ ನಾಗರಾಜ್ ಅವರಿಗೆ, ಪ್ರಸಾಧನ ವಿಜಯ್ ಅವರಿಗೆ, ಭ್ರಮೆ ತಂಡಕ್ಕೆ, ಕಾರ್ಯಕ್ರಮದ ಎಲ್ಲಾ ಸಹ ಆಯೋಜಕರಿಗೆ, ಸೂತ್ರದಾರ ಸತೀಶ ಸತೀಶ್ ಅವಿರತ ರವರಿಗೆ, ಕೊನೆಯದಾಗಿ ನಾಡನ್ನು ಸಂಭ್ರಮಿಸುವ, ನಾಡು ನುಡಿ, ಸಂಸ್ಕೃತಿಯ ಬಗ್ಗೆ ಅವಿರತವಾಗಿ ಸಂತಸದಿಂದ ದುಡಿಯುವ, ಅವಿರತಕ್ಕೆ ಒಂದು ದೊಡ್ಡ ಪ್ರಣಾಮ.

No comments:

Post a Comment