Thursday, June 5, 2014

ನೆಲೆ ನರೇಂದ್ರ ಆವರಣದಲ್ಲಿ ವನಮಹೋತ್ಸವ

ಆತ್ಮೀಯರೆ,

ಅವಿರತ ಮತ್ತು ಒರಾಕಲ್ ಸಂಸ್ಥೆಯ ಸಹಯೋಗದೊಂದಿಗೆ ನೆಲೆ ನರೆಂದ್ರ ಆವರಣದಲ್ಲಿ ಇದೇ ಶನಿವಾರ ವನ ಮಹೋತ್ಸವವನ್ನು ಆಯೋಜಿಸಲಾಗಿದೆ. ಅನಾಥ ಮಕ್ಕಳಿಗೆ ಗೌರವಯುತವಾದ ಜೀವನವನ್ನು ರೂಪಿಸಿಕೊಡುವಲ್ಲಿ ಶ್ರಮಿಸುತ್ತಿರುವ ನೆಲೆ ಸಂಸ್ಥೆಯೊಡನೆ ಕೈ ಜೋಡಿಸಲು ಅವಿರತ ತಂಡಕ್ಕೆ ಹೆಮ್ಮೆಯಿದೆ.

ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ನೋಡಿ: nelehsp.org

ಕಾರ್ಯಕ್ರಮದ ವಿವರ ಹೀಗಿದೆ:

ದಿನಾಂಕ : 7 ಜೂನ್ 2014 ಶನಿವಾರ
ಸ್ಥಳ : ನೆಲೆ ನರೇಂದ್ರ ಆವರಣ

12-12.30pm - ನೆಲೆ ಆವರಣದಲ್ಲಿ ಸೇರುವುದು
12.30-1pm - ನೆಲೆ ಸಂಸ್ಥೆಯ ಬಗ್ಗೆ ಕಿರು ಚಿತ್ರ ಪ್ರದರ್ಶನ
1-2pm - ನೆಲೆಯ ಮಕ್ಕಳೊಡನೆ ಊಟ
2-3.30pm - ವನ ಮಹೋತ್ಸವ - ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
3.30pm-5.30pm - ಮಕ್ಕಳಿಗಾಗಿ ಅವಿರತ ತಂಡ ಹಾಗೂ ಒರಾಕಲ್ ಸಂಸ್ಠೆಯ ಉದ್ಯೋಗಿಗಳಿಂದ ಮನರಂಜನಾ ಕಾರ್ಯಕ್ರಮ

ಸ್ಥಳ:
ನೆಲೆ ನರೇಂದ್ರ
Nele Narendra (named after Swamy Vivekananda’s Poorvashrama name), Opposite Veena Education Trust, No.9 / 2,  Main Road, Lakshmidevi Nagar, Laggere, Bengaluru – 560096,
Phone No. 9742426346

ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಆಸಕ್ತರು ದಯವಿಟ್ಟು ಬನ್ನಿ. ನಿಮ್ಮ ಮಕ್ಕಳನ್ನೂ ಕರೆತನ್ನಿ.


ಧನ್ಯವಾದಗಳು,
ಅವಿರತ ಬಳಗ

No comments:

Post a Comment