Sunday, May 25, 2014

ಎಲ್ಲೋ ಜೋಗಪ್ಪ ನಿನ್ನರಮನೆ...ಜೋಗಿ ಸಂಭ್ರಮ

ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ...!!

ಹೌದು..ನಿನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತಂಡದವರು "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಉತ್ತಮವಾಗಿ ಹಾಡಿದರು.

ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಪರಿ ಅತ್ಯುತ್ತಮವಾಗಿತ್ತು. ಅತ್ತೆ-ಸೊಸೆಯಂದಿರ ಬಾಂಧವ್ಯ, ಹಿಂದಿನ ದಿನಗಳು & ಇಂದಿನ ದಿನಗಳ ಬದಲಾವಣೆ, ವರದಕ್ಷಿಣೆಯ ಬಗ್ಗೆ, ತಾಯಿಯ ಬಗ್ಗೆ, ತಾಯಿ-ಮಗಳ ಮಮತೆಯ ತುಡಿತದ ಬಗೆಗಿನ ಸುಂದರವಾದ & ಹಾಸ್ಯಪೂರ್ವಕ ಲಾವಣಿಗಳನ್ನು ಪ್ರಸ್ತುತಪಡಿಸಿದರು.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಜರಿದ್ದು, ಕಾರ್ಯಕ್ರಮದ ಕೊನೆತನಕ ಜೋಗಿ ಸಂಭ್ರಮದಲ್ಲಿ ಭಾಗಿಯಾಗಿ & ಅವಿರತದ ಕಾರ್ಯಗಳಿಗೆ ಬೆನ್ನು ತಟ್ಟಿದರು.

ಅವಿರತದ ಈ ವಿಶೇಷ ಪ್ರಯೋಗ ಜನರ ಮೆಚ್ಚುಗೆಗೆ ಭಾಜನವಾಯಿತು. ಕಾರ್ಯಕ್ರಮಕ್ಕೆ ಸಹಕಾರಿಯಾದ ಎಲ್ಲ ಮಿತ್ರರಿಗೂ ಹಾಗು ತಾಳ್ಮೆಯಿಂದ ಕಥೆಯನ್ನು ಸವಿದ ಪ್ರೇಕ್ಷಕರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

ಮತ್ತೆ-ಮತ್ತೆ ಉತ್ತೇಜನದ ನಿರೀಕ್ಷೆಯಲ್ಲಿ...

ಅವಿರತ ತಂಡ.


 




 
 


 

No comments:

Post a Comment