Monday, May 12, 2014

"Facebook ಕವನ - ಹಡಪದ್ ಗಾಯನ"

ಇದು, ಅವಿರತ ತಂಡದ ಮತ್ತೊಂದು ಸದಭಿರುಚಿಯ ಕಾರ್ಯಕ್ರಮ. Facebookನ ಕವನಗಳಿಗೆ ಗಾಯನದ ರೂಪ ಕೊಡುವ ಮೊಟ್ಟ ಮೊದಲ ವಿನೂತನ ಪ್ರಯೋಗ ಇದಾಗಿತ್ತು. Facebookನಲ್ಲಿಯ ಆಯ್ದ ಕವನಗಳು ರಾಮಚಂದ್ರರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬಂದವು ಹಾಗೇ ಕೆಲವು ರಂಗಗೀತೆಗಳು, ಭಾವಗೀತೆಗಳು ಕೂಡ ಹಾಡಲ್ಪಟ್ಟವು. ನವ ಕವಿಗಳಿಗೆ ಬರವಣಿಗೆಯ ವಿಸ್ತಾರಕ್ಕೆ ಇದೊಂದು ಉತ್ತಮ ವೇದಿಕೆಯಾಯಿತು. ರಾಮಚಂದ್ರರು FBಲ್ಲಿ ಗೀಚಿದ ಕವನಗಳು ಹಾಗೂ ಕೆಲ ಆಯ್ದ ಭಾವಗೀತೆಗಳು ಸಂಗೀತ ರೂಪಕೊಡುವಲ್ಲಿ ಕಷ್ಟವಾಗಿದ್ದರೂ ಅತ್ಯುತ್ತಮವಾಗಿ ರಾಗ ಸಂಯೋಜಿಸಿ & ಮನೋಜ್ಞವಾಗಿ ಹಾಡಿ ಶ್ರೋತೃಗಳನ್ನು ಮನರಂಜಿಸಿದರು. ಗಾಯಕಿ ಸ್ಪರ್ಶ ಕೂಡ ಸುಂದರವಾಗಿ ಹಾಡಿದರು. ಹಡಪದ್ ಇತ್ತೀಚಿನ ದಿನಗಳ ಒಬ್ಬ ಅದ್ಭುತ ಗಾಯಕ ಹಾಗೂ ಸಂಗೀತ ಲೋಕದ ನವ ಮೋಡಿಗಾರವೆನ್ನುವದರಲ್ಲಿ ಸಂದೇಹವೇ ಇಲ್ಲ. ಅವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಮತ್ತು ಅವಿರತದ ಜೊತೆಗಿನ ಬಾಂಧವ್ಯ ಗಟ್ಟಿಯಾಗಲಿ ಎಂಬ ಆಶಯ.ಕಾರ್ಯಕ್ರಮಕ್ಕೆ ಹಾಜರಿದ್ದು, ಹಡಪದ್ ಹಾಗೂ ತಂಡದ ಗಾಯನವನ್ನು ಆಸ್ವಾದಿಸಿ, ನವ ಕವಿಗಳಿಗೆ ಉತ್ತೇಜನ ನೀಡಿ, ಅವಿರತದ ಈ ಹೊಸ ಪ್ರಯತ್ನಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿಬೆಂಬಲಿಸಿದ ಕವಿಗಳಾದ ಏಚ್. ಎಸ್. ವೆಂಕಟೇಶ ಮೂರ್ತಿ ಹಾಗೂ ಬೀ. ಆರ್. ಲಕ್ಷ್ಮಣರಾವ್ ಅವರಿಗೆ ನಮ್ಮ ಹೃತ್ಪೂರ್ವಕ ನಮನಗಳು. ಹಡಪದ್, ಸ್ಪರ್ಶ ಹಾಗೂ ಸಂಗಡಿಗರಿಗೆ ಉತ್ತಮ ಸಂಗೀತ ಸಂಜೆ ನೀಡಿದಕ್ಕೆ ಅಭಿನಂದನೆಗಳು. ನಮ್ಮ ತಂಡಕ್ಕೆ ಬೆಂಬಲಿಸಿದ ಹಾಗೂ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತ & ವೀಕ್ಷಕ ವರ್ಗಕ್ಕೆ ನಮ್ಮ ಧನ್ಯವಾದಗಳು. ಅವಿರತಕ್ಕೂ ಸಂತೃಪ್ತಿಯ ಭಾವ ತಂದ ಮತ್ತೊಂದು ಸಂಜೆಯ ವಿಶಿಷ್ಟ ಕಾರ್ಯಕ್ರಮ ಇದಾಯಿತು.

No comments:

Post a Comment